ಯುವಕವಿ ಡಾ:ಅಜಿತ್ ಕವನ ಕೃತಿಗೆ ಪ್ರಶಸ್ತಿ

ಶಿರಸಿ :

ಯುವಕವಿ ಡಾ:ಅಜಿತ್ ಹೆಗಡೆ ಹರೀಶಿಯವರ `ಬಿಳಿಮಲ್ಲಿಗೆ ಬಾವುಟ’ ಚೊಚ್ಚಲ ಕವನ ಸಂಕಲನಕ್ಕೆ ಹಾಸನದ ಮಾಣಿಕ್ಯ ಪ್ರಕಶನವು ಕೊಡಮಾಡುವ `ಕಾವ್ಯ ಮಾಣಿಕ್ಯ ಪ್ರಶಸ್ತಿ’ಯನ್ನು ಘೋಷಿಸಲಾಗಿದೆ. ಜುಲೈ 1 ರಂದು ಹಾಸನದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ `ಕವಿ-ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.

ಪ್ರತಿಭಾನ್ವಿತ ಕವಿಗಳೂ, ವೃತ್ತಿಯಲ್ಲಿ ವೈದ್ಯರೂ ಆದ ಡಾ:ಅಜಿತ ಹೆಗಡೆಯವರು ಅಪ್ಪಟ ಕೃಷಿಕರೂ ಹೌದು. ಶಿರಸಿ ತಾಲೂಕಾ ಸಾಹಿತ್ಯ ಸಮ್ಮೇಳನ ಸಹಿತ ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿರುವರು. ಅಲ್ಲದೇ ಭದ್ರಾವತಿ ಮತ್ತು ಕಾರವಾರ ಆಕಾಶವಾಣಿ ಕೇಂದ್ರಗಳಲ್ಲಿಯೂ ಇವರ ಆಯ್ದ ಕವಿತೆಗಳು ಭಿತ್ತರಗೊಂಡಿವೆ. ನಾಡಿನ ಬಹಳಷ್ಟು ಹಿರಿಕಿರಿಯ ಪತ್ರಿಕೆಗಳಲ್ಲಿಯೂ ಇವರ ಕವಿತೆಗಳು ಪ್ರಕಟಗೊಳ್ಳುತ್ತಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ