ಮನೆಯೊಂದರ ಮುಂಬಾಗಿಲು ಒಡೆದು ಒಳನುಗ್ಗಿದ ಚೋರರು ಚಿನ್ನ-ಬೆಳ್ಳಿ ಆಭರಣಗಳು ಹಾಗೂ ನಗದನ್ನು ದೋಚಿ ಪರಾರಿ

 

ಬೆಂಗಳೂರು, ಜೂ.11- ಮನೆಯೊಂದರ ಮುಂಬಾಗಿಲು ಒಡೆದು ಒಳನುಗ್ಗಿದ ಚೋರರು ಚಿನ್ನ-ಬೆಳ್ಳಿ ಆಭರಣಗಳು ಹಾಗೂ ನಗದನ್ನು ದೋಚಿರುವ ಘಟನೆ ಆರ್‍ಟಿ ನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆರ್‍ಟಿ ನಗರದ ನಾರಾಯಣಪ್ಪ ಬ್ಲಾಕ್ ನಿವಾಸಿ ಲೋಹಿತ್ ಎಂಬುವವರು ಕುಟುಂಬ ಸಮೇತ ಜೂ.8ರಂದು ಬೆಳಗ್ಗೆ 7 ಗಂಟೆಗೆ ದೇವಸ್ಥಾನಕ್ಕೆ ತೆರಳಿದ್ದರು.
ಈ ಸಂದರ್ಭದಲ್ಲಿ ಕಳ್ಳರು ಇವರ ಮನೆಯ ಮುಂಬಾಗಿಲ ಬೀಗ ಒಡೆದು ಒಳನುಗ್ಗಿ ಹಣ-ಆಭರಣ ದೋಚಿದ್ದಾರೆ.
ಇಂದು ಮುಂಜಾನೆ 2.30ರಲ್ಲಿ ಲೋಹಿತ್ ಕುಟುಂಬ ಮನೆಗೆ ವಾಪಸಾದಾಗಲೇ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ವಿಷಯ ತಿಳಿದ ಆರ್‍ಟಿ ನಗರ ಠಾಣೆ ಪೆÇಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ