ಮಹಾನಗರ ಪಾಲಿಕೆ ಸದಸ್ಯ ಸಿ.ಕೆ.ನಿಂಗರಾಜು ಅವರ ಪುತ್ರ ರಾಕೇಶ್‍ನ ಬಂಧನ

ದಾವಣಗೆರೆ, ಜೂ.7- ಯುವಕನಿಗೆ ಚಾಕು ಇರಿದ ಆರೋಪದಡಿ ಮಹಾನಗರ ಪಾಲಿಕೆ ಸದಸ್ಯ ಸಿ.ಕೆ.ನಿಂಗರಾಜು ಅವರ ಪುತ್ರ ರಾಕೇಶ್‍ನನ್ನು ಕೆಪಿಜೆ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಎಸ್‍ಎಸ್‍ನಗರ ಸೇವಾದಳ ವಸತಿ ಗೃಹ ನಿವಾಸಿ ಫೆÇೀಟೋಗ್ರಾಫರ್ ಬಿ.ಆರ್.ಹರೀಶ್ ಇರಿತಕ್ಕೊಳಗಾಗಿರುವ ಯುವಕ.
ಹಿನ್ನೆಲೆ:
ಹರೀಶ್, ರಾಕೇಶ್ , ರಕ್ಷಿತಾ ಹಾಗೂ ಇತರರು ಸೇರಿಕೊಂಡು ಆಲ್ಬಂ ಹಾಡುಗಳನ್ನು ಚಿತ್ರೀಕರಿಸಿದರು. ರಾಕೇಶ್ ರಕ್ಷಿತಾಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಈ ನಡುವೆ ಆದರೆ ಇತ್ತೀಚೆಗೆ ರಕ್ಷಿತಾ ಪ್ರೀತಿಸುವುದನ್ನು ಬಿಟ್ಟು ಸ್ನೇಹಿರಾಗಿರುವಂತೆ ಹೇಳಿದ್ದಳು.
ಇದರಿಂದ ತಾನು ಪ್ರೀತಿಸುತ್ತಿರುವ ರಕ್ಷಿತಾಳನ್ನು ಹರೀಶ್ ಪ್ರೀತಿ ಮಾಡುತ್ತಿದ್ದಾನೆ ಎಂದು ತಪ್ಪಾಗಿ ತಿಳಿದುಕೊಂಡ ರಾಕೇಶ್ ಆತನೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ ಎನ್ನಲಾಗಿದೆ.
ಹರೀಶ್ ರಕ್ಷಿತಾ ಮನೆಯಲ್ಲಿದ್ದ ಕ್ಯಾಮೆರಾ, ಗಿಟಾರ್‍ನ್ನು ತೆಗೆದುಕೊಂಡು ಬರಲು ತೆರಳಿದ್ದಾಗ ಇದ್ದಕ್ಕಿದ್ದಂತೆ ರಕ್ಷಿತಾ ಮನೆಗೆ ರಾಕೇಶ್ ಬಂದಿದ್ದಾನೆ.
ಈ ವೇಳೆ ಹರೀಶ್ ಮತ್ತು ರಾಕೇಶ್ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ಸಂದರ್ಭದಲ್ಲಿ ಜಗಳ ವಿಕೋಪಕ್ಕೆ ತಿರುಗಿದ್ದಾಗ ರಾಕೇಶ್ ಚಾಕುವನ್ನು ತೆಗೆದು ನಿನ್ನನ್ನು ಜೀವಂತವಾಗಿ ಬಿಟ್ಟರೆ ತಾನೇ ರಕ್ಷಿತಾಳನ್ನು ಪ್ರೀತಿ ಮಾಡುವುದು ಎಂದು ಚಾಕುವಿನಿಂದ ತಲೆ, ಬೆನ್ನು, ಎದೆಗೆ ಇರಿದಿದ್ದಾನೆ ಎಂದು ಹರೀಶ್ ದೂರಿನಲ್ಲಿ ತಿಳಿಸಿದ್ದಾನೆ ಎಂದು ಪೆÇಲೀಸರು ತಿಳಿಸಿದ್ದಾನೆ.
ಈ ಸಂಬಂಧ ರಾಕೇಶ್‍ನನ್ನು ಪೆÇಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ