ಕಾಲ ಚಿತ್ರ ಬಿಡುಗಡೆಗೂ ಕಾವೇರಿ ನದಿ ನೀರಿಗೂ ಎಲ್ಲಿಂದೆಲ್ಲಿಯ ಸಂಬಂಧ: ನಟ ಪ್ರಕಾಶ್ ರೈ

ಬೆಂಗಳೂರು:ಜೂ-4: ಸೂಪರ್‌ ಸ್ಟಾರ್‌ ರಜನಿಕಾಂತ್‌ ನಟನೆಯ ಕಾಲ ಚಿತ್ರವನ್ನು ರಾಜ್ಯದಲ್ಲಿ ಬ್ಯಾನ್‌ ಮಾಡಲಾಗಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ನಟ ಪ್ರಕಾಶ್ ರೈ, ಕಾಲ ಚಿತ್ರ ಬಿಡುಗಡೆದೂ ಕಾವೇರಿ ನದಿ ನೀರು ಎಲ್ಲಿಂದೆಲ್ಲಿಯ ಸಂಬಂಧ ಎಲ್ಲ ಸಮಯದಲ್ಲಿಯೂ ಸಿನಿಮಾಗಳನ್ನೇ ಯಾಕೆ ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ಪ್ರೆಶ್ನಿಸಿದ್ದಾರೆ.

ರಾಜ್ಯದಲ್ಲಿ ಕಾಲ ಚಿತ್ರ ಬಿಡುಗಡೆಗೆ ನಿರ್ಬಂಧ ಹೇರಿರುವ ಹಿನ್ನಲೆಯಲ್ಲಿ ತೀವ್ರ್ ಅಸಮಾಧಾನ ವ್ಯಕ್ತಪಡಿಸಿರುವ ಪ್ರಕಾಶ್ ರೈ, ಪದ್ಮಾವತ್ ಚಿತ್ರದ ವೇಳೆಯೂ ಕೇಂದ್ರ ಸರ್ಕಾರ ಮಾಡಿದ ಹಾಗೆ ಕೆಲವರು ಕಾನೂನನ್ನು ಕೈಗೆತ್ತುಕೊಳ್ಳಲು ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಕೂಡ ಅವಕಾಶ ಮಾಡುತ್ತದೆಯೇ ಎಂದು ರೈ ಪ್ರಶ್ನಿಸಿದ್ದಾರೆ.

ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಕರ್ನಾಟಕ ವಿರೋಧಿಸಿದ್ದರೆ, ರಜನಿಕಾಂತ್‌ ತಮಿಳುನಾಡಿನ ಪರವಾಗಿ ಮಂಡಳಿ ರಚನೆಗೆ ಒತ್ತಾಯಿಸಿದ್ದರು. ಇದು ಕನ್ನಡಿಗರನ್ನು ಕೆರಳಿಸಿದ್ದು, ಹಲವು ಕನ್ನಡಪರ ಸಂಘಟನೆಗಳು ರಜನಿ ಚಿತ್ರವನ್ನು ರಾಜ್ಯದಲ್ಲಿ ಪ್ರದರ್ಶಿಸಕೂಡದು ಎಂದು ಆಗ್ರಹಿಸಿವೆ. ಸ್ಯಾಂಡಲ್‌ವುಡ್‌‌ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಕಾಲ ಚಿತ್ರದ ಪ್ರದರ್ಶನಕ್ಕೆ ಅನುಮತಿ ನೀಡದೆ, ಕಾವೇರಿ ಹೋರಾಟಗಾರರಿಗೆ ಸ್ಪಂದಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ