ಹಿಂದೂ ಸಹೋದರಿಂದಲೆ ದೇವಸ್ಥಾನದ ಎದುರೇ ಹಸುಳೆ ಮೇಲೆ ಅತ್ಯಾಚಾರ: ನಾನು ಹಿಂದೂ ಅಂತ ಹೇಳಿಕೊಳ್ಳಲು ತುಂಬಾ ನೋವಾಗುತ್ತಿದೆ ಎಂದ ನಟಿ ಜಯಮಾಲ

ತುಮಕೂರು: ನಾನು ಹಿಂದೂ ಅಂತ ಹೇಳಿಕೊಳ್ಳಲು ತುಂಬಾ ನೋವಾಗುತ್ತಿದೆ ಎಂದು ಹಿರಿಯ ಚಿತ್ರನಟಿ ಜಯಮಾಲ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ
ಜಾತೀಯತೆ,ಕೋಮುವಾದ ತಾಂಡವವಾಡುತ್ತಿದೆ, ಉತ್ತರ ಪ್ರದೇಶದದಂತಹ ರಾಜ್ಯದಲ್ಲಿ ಹಸುಳೆಗಳ ಮೇಲೆ ಅತ್ಯಾಚಾರ ನಡೆಯುತ್ತಿದೆ. ಉತ್ತರ ಪ್ರದೇಶದಲ್ಲಿ ಹಿಂದೂ ಸಹೋದರರೆ ದೇವಸ್ಥಾನದ ಎದುರೇ ಹಸುಳೆಯನ್ನು
ಅತ್ಯಾಚಾರ ಎಸಗಿದ್ದಾರೆ, ಹೀಗಾಗಿ ನಾನು ಹಿಂದೂ ಎಂದು ಹೇಳಿಕೊಳ್ಳಲು ನೋವಾಗುತ್ತದೆ ಎಂದು ಹೇಳಿದರು.

ಈ ಎಲ್ಲಾ ಅತ್ಯಾಚಾರಕ್ಕೆ ಸಮಾಜ ಕಾರಣ ಅಲ್ಲ, ಕೇಂದ್ರ ಸಕರ್ಾರ ಹಾಗೂ ಉತ್ತರ ಪ್ರದೇಶ ಸಕರ್ಾರವೇ
ಕಾರಣ, ಹಿಂದೂತ್ವ ಮತ್ತು ಕೋಮುವಾದದ ಹೆಸರಿನಲ್ಲಿ ಇಂತಹ ಕೆಲಸ ಮಾಡುತ್ತಿದ್ದಾರೆಂದು ಜಯಮಾಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ