ಪದ್ಮನಾಭನಗರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವೆ: ಎಂಇಪಿಯ ಶರೀಫ್

ಬೆಂಗಳೂರು ಏ 27: ಪದ್ಮನಾಭನಗರ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡಲು ಸಂಕಲ್ಪ ತೊಟ್ಟಿದ್ದೇನೆ ಎಂದು ಎಂಇಪಿ ಪಕ್ಷದ ಅಭ್ಯರ್ಥಿ ಅಕ್ಮಲ್ ಶರೀಫ್ ಹೇಳಿದ್ದಾರೆ.

ನಗರದ ಚನ್ನಮ್ಮನ ಕೆರೆ ಕ್ರೀಡಾಂಗಣದಿ‌ಂದ ಆರಂಭವಾದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿವೆ ವಿಶೇಷವಾಗಿ ಮಳೆ ಬಂದಾಗ ಜನರು ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ ಇದಲ್ಲದೇ ಬಡಮಕ್ಕಳಿಗೆ ಒಳ್ಳೆಯ ಶಾಲೆಗಳಿಲ್ಲ, ಬಡವರಿಗೆ ಆಸ್ಪತ್ರೆಗಳಿಲ್ಲ ಎಂದರು.

30 ವರ್ಷಗಳಿಂದ ಈ ಕ್ಷೇತ್ರದ ನಿವಾಸಿಯಾಗಿದ್ದೇನೆ ಜನರು ಬದಲಾವಣೆ ಬಯಸುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಡಾ.ನೌಹೀರಾ ಶೇಕ್ ಕೈಬಲಪಡಿಸುವ ಉದ್ದೇಶದಿಂದ ಯಾವುದೆ ಷರತ್ತು ಇಲ್ಲದೆ ಪಕ್ಷ ಸೇರಿದ್ದೇನೆ ಎಂದರು.

ಸಮಾಜದಲ್ಲಿ ಮಹಿಳೆಯರಿಗೆ ಒಳ್ಳೆಯ ಸ್ಥಾನಮಾನ ಮತ್ತು ಗೌರವ ಸಿಗಬೇಕು ನೊಂದವರಿಗೆ ನ್ಯಾಯ ದೊರಕಬೇಕು ಎಂಬ ಎಂಇಪಿ ಪರಿಕಲ್ಪನೆಗೆ ಜನರು ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು

ಕ್ರೀಡಾಂಗಣದಿಂದ ಆರಂಭವಾದ ರ್ಯಾಲಿ, ಬಿಡಿಎ ಕಾಂಪ್ಲೇಸ್, ಯಾರ್ಬ್ ನಗರ, ಕದಿರೆನಹಳ್ಳಿ ಕ್ರಾಸ್, ಸಾರಕಿ ಸಿಗ್ನಲ್, ಬನಶಂಕರಿ ದೇವಸ್ಥಾನ ಮುಂದೆ ಹೋಗಿ ಉಮರ್ ಬಾಗ್ ಬಡಾವಣೆಯಲ್ಲಿ ಕೊನೆಗೊಂಡಿತ್ತು. ಪಕ್ಷದ ಕೆಲ ಮುಖಂಡರು, ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗಿಯಾಗಿದ್ದರು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ