ಚುನಾವಣಾ ಬಂದೋಬಸ್ತ್ ಹಿನ್ನಲೆ: 21 ಕಂಪನಿ ಕೇಂದ್ರ ಪಡೆಗಳು ಬೆಂಗಳೂರು ನಗರಕ್ಕೆ ಆಗಮನ

ಬೆಂಗಳೂರು,ಏ.21- ಚುನಾವಣಾ ಬಂದೋಬಸ್ತ್‍ಗಾಗಿ 21 ಕಂಪನಿ ಕೇಂದ್ರ ಪಡೆಗಳು ಬೆಂಗಳೂರು ನಗರಕ್ಕೆ ಬಂದಿವೆ ಎಂದು ನಗರ ಪೆÇಲೀಸ್ ಆಯುಕ್ತ ಟಿ.ಸುನೀಲ್‍ಕುಮಾರ್ ತಿಳಿಸಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಇದುವರೆಗೂ 21 ಕಂಪನಿ ಕೇಂದ್ರ ಪಡೆಗಳು ಆಗಮಿಸಿದ್ದು, ಮತದಾನ ಸಮೀಪಿಸುವ ವೇಳೆಗೆ ಇನ್ನಷ್ಟು ಕೇಂದ್ರ ಪಡೆಗಳು ನಗರಕ್ಕೆ ಬರಲಿವೆ ಎಂದರು.

ಈಗಾಗಲೇ ಬಂದಿರುವ ಕೇಂದ್ರ ಪಡೆಗಳನ್ನು ವಿಧಾನಸಬಾ ಕ್ಷೇತ್ರಗಳಿಗೂ ನಿಯೋಜಿಸಲಾಗಿದೆ.
28ಪ್ಲಟೂನ್ ಕೆಎಸ್‍ಆರ್‍ಪಿ, ಸಿಎಆರ್ ಪ್ಲಟೂನ್‍ಗಳನ್ನು ಸಹ ಈಗಾಗಲೇ ಚುನಾವಣಾ ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿದೆ.
ನಗರದಲ್ಲಿ ಮುಕ್ತ ಹಾಗೂ ಶಾಂತಿಯುತ ಮತದಾನಕ್ಕಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ