ನಿಯಮ ಉಲ್ಲಂಘನೆ ತಾಲೂಕಿನ 4 ವೈನ್‍ಸ್ಟೋರ್‍ಗಳಿಗೆ ಅಬಕಾರಿ ಅಧಿಕಾರಿಗಳು ಬೀಗ :

ಚನ್ನಪಟ್ಟಣ, ಏ.21- ನಿಯಮ ಉಲ್ಲಂಘನೆ ಮಾಡಿದ ಆಪಾದನೆಯಡಿ ತಾಲೂಕಿನ 4 ವೈನ್‍ಸ್ಟೋರ್‍ಗಳಿಗೆ ಅಬಕಾರಿ ಅಧಿಕಾರಿಗಳು ಬೀಗ ಹಾಕಿದ್ದಾರೆ.
ಪಟ್ಟಣದ ಜೆ.ಸಿ.ರಸ್ತೆಯ ಚೇತನ ವೈನ್ಸ್, ಆನಂದಪುರದ ಸಾತನೂರು ರಸ್ತೆಯ ಗರುಡಾದ್ರಿ ವೈನ್ಸ್, ಸಾತನೂರು ರಸ್ತೆಯ ಚಂದು ವೈನ್ಸ್, ಮಂಗಳವಾರ ಪೇಟೆಯ ಅನುವೈನ್ಸ್ ಗಳಲ್ಲಿ ನಿಯಮ ಉಲ್ಲಂಘನೆ ಮಾಡಿದ್ದ ಪ್ರಕರಣಗಳು ಕಂಡುಬಂದ ಹಿನ್ನೆ¯ಯಲ್ಲಿ ಈ ಮದ್ಯದಂಗಡಿಗಳನ್ನು ಬಂದ್ ಮಾಡಿರುವುದಾಗಿ ಅಬಕಾರಿ ನಿರೀಕ್ಷಕ ಮಲ್ಲಿಕಾರ್ಜುನ್ ತಿಳಿಸಿದರು.
ನಿಯಮ ಬಾಹಿರವಾಗಿ ಈ ವೈನ್‍ಸ್ಟೋರ್‍ಗಳಲ್ಲಿ ಲೋಟ ನೀಡಿ, ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದು, ಗ್ರಾಹಕರಿಗೆ ಮಾರಾಟ ಮಾಡಿದ ಮದ್ಯಗಳಿಗೆ ಸೂಕ್ತ ರಶೀದಿ ನೀಡದಿರುವುದು ಪರಿಶೀಲನೆ ವೇಳೆ ಕಂಡು ಬಂದಿದು, ಕಾನೂನು ಕ್ರಮ ಜರುಗಿಸಿರುವುದಾಗಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ