ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ಎರಡು ಸಾವಿರ ಮುಖಬೆಲೆಯ ನಾಲ್ಕು ಲಕ್ಷ ರೂ ವಶ:

ಮಂಡ್ಯ, ಏ.19- ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ಎರಡು ಸಾವಿರ ಮುಖಬೆಲೆಯ ನಾಲ್ಕು ಲಕ್ಷ ರೂ ಹಾಗೂ ಚಾಲಕನನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ. ಗುರುಪ್ರಸಾದ್ ಎಂಬಾತ ಕಾರಿನಲ್ಲಿ ಎರಡು ಸಾವಿರ ಮುಖಬೆಲೆಯ ನಾಲ್ಕು ಲಕ್ಷ ರೂ.ಗಳನ್ನು ರಾತ್ರಿ 7.30ರ ವೇಳೆ ಕುಣಿಗಲ್‍ನಿಂದ ಮದ್ದೂರಿಗೆ ಸಾಗಿಸುವಾಗ ಮದ್ದೂರು ತಾಲೂಕಿನ ಆತಗೂರು ಹೋಬಳಿಯ ಮಲ್ಲಿನಕುಪ್ಪೆ ಗೇಟ್ ಬಳಿ ಚುನಾವಣಾಧಿಕಾರಿ ಕೃಷ್ಣಪ್ಪ ಮತ್ತು ವೃತ್ತ ನಿರೀಕ್ಷಕ ಪ್ರೀತಮ್ ಶ್ರೇಯಾಂಕ್ ದಾಳಿ ನಡೆಸಿದ್ದಾರೆ.
ಚಾಲಕ ಗುರುಪ್ರಸಾದ್‍ನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ