ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಾಳೆ ಮಧ್ಯಾಹ್ನ 1 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದೇನೆ – ಶಾಸಕ ಪಿ.ಆರ್.ಸುಧಾಕರಲಾಲ್

ಕೊರಟಗೆರೆ,ಏ.19- ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಾಳೆ ಮಧ್ಯಾಹ್ನ 1 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ಬಲವರ್ಧನೆ ಮತ್ತು ಯುವಕರಿಗೆ ಶಕ್ತಿಯಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಗ, ನಾಯಕನಟ ನಿಖಿಲ್‍ಕುಮಾರಣ್ಣ ಪ್ರಥಮವಾಗಿ ಕೊರಟಗೆರೆ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಮಾತನಾಡಿ, ಕೊರಟಗೆರೆಯಲ್ಲಿ ಜೆಡಿಎಸ್ ಪಕ್ಷದ ಗೆಲುವಿಗಾಗಿ ಸ್ವಯಂಪ್ರೇರಿತವಾಗಿ ಯುವಕರು ಸೈನಿಕರಂತೆ ಮನೆ ಮನೆಗೆ ತೆರಳಿ ಸುಧಾಕರಲಾಲ್ ಗೆಲುವಿಗೆ ಪ್ರಚಾರ ಕೈಗೊಂಡಿದ್ದಾರೆ.
ಜಿಪಂ ಸದಸ್ಯ ಶಿವರಾಮಯ್ಯ ಮಾತನಾಡಿ, ಕೊರಟಗೆರೆಯಲ್ಲಿ 5 ವರ್ಷ ಶಾಸಕ ಸುಧಾಕರಲಾಲ್ ಕೈಗೊಂಡ ಜನ ಸೇವೆಯೇ ಪಕ್ಷದ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದರು.
ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ನಾಯಕನಟ ನಿಖಿಲ್‍ಕುಮಾರಣ್ಣ ಅವರೊಂದಿಗೆ ಶಾಸಕ ಪಿ.ಆರ್.ಸುಧಾಕರಲಾಲ್ ಮೆರವಣಿಗೆ ಮೂಲಕ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ 30 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಆಗಮಿಸುವ ನಿರೀP್ಷÉ ಇದೆ ಎಂದು ಕಾರ್ಯಧ್ಯಕ್ಷ ನರಸಿಂಹರಾಜು ಹೇಳಿದರು.
ಜಿಪಂ ಸದಸ್ಯ ಲಕ್ಷ್ಮೀನರಸೇಗೌಡ, ತಿಮ್ಮಯ್ಯ, ಯುವಘಟಕದ ಅಧ್ಯಕ್ಷ ವೆಂಕಟೇಶ್, ತಾಪಂ ಸದಸ್ಯರಾದ ಬೋರಣ್ಣ, ಚಿಕ್ಕನರಸಪ್ಪ, ರಾಮಣ್ಣ, ಮಾಜಿ ಸದಸ್ಯ ಪ್ರಕಾಶ್, ಕಾರ್ಯದರ್ಶಿ ಲಕ್ಷ್ಮಣ್, ವಕ್ತಾರ ತುಂಬಾ ಡಿ.ಲಕ್ಷ್ಮೀಶ್, ಮುಖಂಡರಾದ ಲಕ್ಷ್ಮೀಶ್, ರತ್ನಾಕರ, ಶ್ರೀಧರ, ಲಕ್ಷ್ಮೀಶ್‍ಪ್ರಸಾದ್, ಚೌಡಪ್ಪದೊಡ್ಡಯ್ಯ, ಕಿಶೋರ್, ಈಶ್ವರಪ್ಪ, ಖಡ್ಗ ತಿಮ್ಮರಾಜು, ಲಕ್ಷ್ಮೀನಾರಾಯಣ್, ನಾಗರಾಜು, ಹನುಮಂತರಾಜು, ದೊಡ್ಡಯ್ಯ, ಸುರೇಶ್ ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ