ಕಾಂಗ್ರೆಸ್ ಟಿಕೆಟ್ ನೀಡುವಂತೆ ಇಂದು ಇಲ್ಲಿಗೆ ಬಂದಿದ್ದ ತಿಪ್ಪೇಸ್ವಾಮಿಗೆ ಭ್ರಮ ನಿರಸನ

ಮೈಸೂರು, ಏ.17- ಶ್ರೀರಾಮುಲು ವಿರುದ್ಧ ಸಿಡಿದೆದ್ದು ಮೊಳಕಾಲ್ಮೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡುವಂತೆ ಇಂದು ಇಲ್ಲಿಗೆ ಬಂದಿದ್ದ ತಿಪ್ಪೇಸ್ವಾಮಿ ಅವರು ಭ್ರಮ ನಿರಸನಗೊಂಡಿದ್ದಾರೆ.
ಹೇಗಾದರೂ ಮಾಡಿ ರೆಡ್ಡಿ ಬ್ರದರ್ಸ್‍ಗೆ ತಿರುಗೇಟು ನೀಡಬೇಕೆಂದು ಬೆಂಬಲಿಗರ ಸಭೆಗಳನ್ನು ನಡೆಸಿ ಕೊನೆಗೆ ಸಿಎಂ ಸಿದ್ದರಾಮಯ್ಯ ಅವರ ಬಳಿಗೆ ತನ್ನ ಬೇಡಿಕೆಗಳನ್ನು ಹೊತ್ತು ತಿಪ್ಪೇಸ್ವಾಮಿ ಇಲ್ಲಿ ಭಾರೀ ವಿಶ್ವಾಸದೊಂದಿಗೆ ಬಂದಿದ್ದರು. ಸಿಎಂ ಭೇಟಿಯಾದರೂ ಆದರೂ ಅವರಿಗೆ ನಿರಾಸೆ ಕಾದಿತ್ತು.
ಬಂದ ದಾರಿಗೆ ಸುಂಕವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣಗೊಂಡು ತಿಪ್ಪೇಸ್ವಾಮಿ ಅಲ್ಲಿಂದ ನಿರಾಶೆಯಾಗಿ ಹೊರಟು ಹೋದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ತಿಪ್ಪೇಸ್ವಾಮಿ ಅವರು ಬಿಜೆಪಿಯಲ್ಲಿ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ತಮ್ಮನ್ನು ಭೇಟಿ ಮಾಡಲು ಬಂದಿದ್ದಾರೆ. ಆದರೆ, ಅವರಿಗೆ ಕಾಂಗ್ರೆಸ್ ಬಾಗಿಲು ಮುಚ್ಚಿದೆ. ಅವರ ಕಾಲ ಮಿಂಚಿ ಹೋಗಿದೆ ಎಂದು ಹೇಳಿದರು.
ಮೊಳಕಾಲ್ಮೂರು ಕ್ಷೇತ್ರಕ್ಕೆ ಈಗಾಗಲೇ ಅಭ್ಯರ್ಥಿಯ ಘೋಷಣೆಯಾಗಿದೆ. ಅಲ್ಲಿನ ಅಭ್ಯರ್ಥಿ ಬದಲಾವಣೆ ಸಾಧ್ಯವಿಲ್ಲ. ಹಾಗಾಗಿ ತಿಪ್ಪೇಸ್ವಾಮಿ ಅವರಿಗೆ ಮುಂದೆ ನೋಡೋಣ ಎಂದು ಹೇಳಿದ್ದೇನೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ