ಪಾವಗಡದಲ್ಲಿ ಬಿಜೆಪಿ ಕಚೇರಿಯಲ್ಲಿನ ಪೀಠೋಪಕರಣಗಳನ್ನು ಪೀಸ್ ಪೀಸ್ ಮಾಡಿದ್ದೇಕೆ? ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾದರೂ ಏನು?

ಪಾವಗಡ,ಏ.17

ಪಾವಗಡ ಕ್ಷೇತ್ರದಿಂದ ಬಲರಾಂ ಅವರು ಬಿಜೆಪಿ ಪರ ಸರ್ಧಿಸುತ್ತಾರೆ ಎಂಬ ವದಂತಿ ಹಿನ್ನಲೆ ಪಕ್ಷದ ಕಾರ್ಯಕರ್ತರು ಬಿಜೆಪಿ ಕಚೇರಿಯಲ್ಲಿನ ಪೀಠೋಪಕರಣಗಳನ್ನು ಧ್ವಂಸ ಮಾಡಿದ ಘಟನೆ ನಡೆದಿದೆ.

ಪಾವಗಡ ಮೀಸಲು ಕ್ಷೇತ್ರದಿಂದ ಕೊತ್ತೂರು ನಾರಾಯಣಸ್ವಾಮಿ ಮತ್ತು ಕೃಷ್ಣಾನಾಯ್ಕ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ, ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದ ಬಲರಾಂ ಬಿಜೆಪಿ ಪರ ಸ್ಪರ್ಧಿಸುತ್ತಿದ್ದಾರೆ ಎಂಬ ವದಂತಿ ಪಾವಗಡದಲ್ಲಿ ಹರಡಿದ್ದು, ಇದು ಬಿಜೆಪಿ ಕಾರ್ಯಕರರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿನ ಚೇರ್ ಮತ್ತು ಟೇಬಲ್ ಸೇರಿದಂತೆ ಇತರೆ ಪೀಠೋಪಕರಣಗಳನ್ನು ರಸ್ತೆಗೆ ಬಿಸಾಡಿ ಧ್ವಂಸಗೊಳಿ, ಪ್ರತಿಭಟನೆ ನಡೆಸಿದ್ದಾರೆ. ಮಾತ್ರವಲ್ಲದೇ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿರುವ ಬಲರಾಂಗೆ ಯಾವುದೇ ಕಾರಣಕ್ಕೂ ಬಿಜೆಪಿ ಟಿಕೆಟ್ ಕೊಡಬಾರದೆಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ