ಬೆಂಗಳೂರು, ಏ.16- ಕಳೆದ ಒಂದು ವಾರದಿಂದ ನಡೆದ ಸರ್ಕಸ್ ಕೊನೆಗೂ ಪೂರ್ಣಗೊಂಡಿದ್ದು ಕಾಂಗ್ರೆಸ್ ಅಳೆದು ತೂಗಿ ಮೊದಲ ಹಂತದಲ್ಲಿ 218 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಸಿಂಧಗಿ, ನಾಗಠಾಣ, ಮೇಲುಕೋಟೆ, ಕಿತ್ತೂರು, ರಾಯಚೂರು, ಶಾಂತಿನಗರ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸದೆ ಕಾಂಗ್ರೆಸ್ ಬಾಕಿ ಉಳಿಸಿದೆ. 15 ಮಹಿಳೆಯರಿಗೆ, 11 ಮುಸ್ಲಿಂರಿಗೆ, ಇಬ್ಬರು ಕ್ರಿಶ್ಚಿಯನರಿಗೆ, ಇಬ್ಬರು ಜೈನರಿಗೆ ಟಿಕೆಟ್ ನೀಡಲಾಗಿದೆ.
ವಿಧಾನ ಪರಿಷತ್ ಸದಸ್ಯರಾದ ಡಾ.ಜಿ.ಪರಮೇಶ್ವರ್, ಎಸ್.ಆರ್.ಪಾಟೀಲ್, ಶ್ರೀನಿವಾಸ ಮಾನೆ, ಎಂ.ಆರ್.ಸೀರಾಂ, ಎಚ್.ಎಂ.ರೇವಣ್ಣ, ಬೈರತಿ ಸುರೇಶ್ ಅವರು ಟಿಕೆಟ್ ಗಿಟ್ಟಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನಿರಕರಿಸಲಾಗಿದೆ. ಆದರೆ ಅವರ ಪುತ್ರ ಯತೀಂದ್ರ ಅವರಿಗೆ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಸಿದ್ದರಾಮಯ್ಯ ಅವರ ಆಪ್ತ ಮಹದೇವಪ್ಪ ಅವರಿಗೆ ಟಿಕೆಟ್ ನೀಡದೆ ಕೈ ಬಿಡಲಾಗಿದೆ. ಬದಲಾಗಿ ಸಚಿವರಾದ ಜಯಚಂದ್ರ ಪುತ್ರ ಸಂತೋಷ್, ರಾಮಲಿಂಗಾ ರೆಡ್ಡಿ ಸೌಮ್ಯ, ಎಂ.ಕೃಷ್ಣಪ್ಪ ಅವರ ಪುತ್ರ ಹಾಲಿ ಶಾಸಕ ಪ್ರಿಯಾ ಕೃಷ್ಣ, ಸಂಸದರಾದ ಕೆ.ಎಚ್.ಮುನಿಯಪ್ಪ ಅವರ ಪುತ್ರಿ, ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಹಾಗೂ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಮತ್ತೆ ಸ್ಪರ್ಧಿಸಲು ಅವಕಾಶ ಗಿಟ್ಟಿಸಿದ್ದಾರೆ.
ಬಿಜೆಪಿಯಿಂದ ವಲಸೆ ಬಂದ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿರುವ ಎಂ.ಡಿ.ಲಕ್ಷ್ಮೀನಾರಾಯಣ ಅವರಿಗೆ ಬೆಳಗಾವಿ ದಕ್ಷಿಣ ಕ್ಷೇತ್ರದಿಂದ, ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಂತರ ಬಿಜೆಪಿಯಿಂದ ವಲಸೆ ಬಂದ ಎಂ.ವೈ.ಪಾಟೀಲ್ರಿಗೆ ಅಫ್ಜಲ್ಪುರ ಕ್ಷೇತ್ರದಿಂದ, ಕೆಜೆಪಿಯಿಂದ ಬಂದ ಬಿ.ಆರ್.ಪಾಟೀಲ್ರಿಗೆ ಅಳಂದ ಕ್ಷೇತ್ರದಿಂದ, ತೀವ್ರ ವಿವಾದಕ್ಕೀಡಾಗಿದ್ದರೂ ಉದ್ಯಮಿ ಅಶೋಕ್ ಖೇಣಿ ಅವರಿಗೆ ಬೀದರ್ ದಕ್ಷಿಣ ಕ್ಷೇತ್ರದಿಂದ, ವಿಜಯಪುರ ಕ್ಷೇತ್ರದಿಂದ ಆನಂದ್ ಸಿಂಗ್,
ಬಳ್ಳಾರಿ (ಎಸ್ಟಿ) ಕ್ಷೇತ್ರದಿಂದ ಬಿ.ನಾಗೇಂದ್ರ, ಪಕ್ಷೇತರರ ಶಾಸಕರಾಗಿದ್ದ ಮಂಕಾಳ ಸುಬ್ಬಾ ವೈದ್ಯ ಭಟ್ಕಳ ಕ್ಷೇತ್ರದಿಂದ, ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿದ ಆರ್.ಎಸ್.ರವಿಕುಮಾರ್ ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ.
ಹಾಲಿ ಶಾಸಕ ಶಿವಮೂರ್ತಿ ಅವರಿಗೆ ಟಿಕೆಟ್ ನಿರಾಕರಿಸಿ ಮಾಯಕೊಂಡ ಕ್ಷೇತ್ರದಿಂದ ಕೆ.ಎಸ್.ಬಸವರಾಜಪ್ಪ ಅವರಿಗೆ ನೀಡಲಾಗಿದೆ. ಎನ್ಎಸ್ಯುಐನ ಮಂಜುನಾಥ್ ಗೌಡ, ಮೆಯರ್ ಸಂಪತ್ ರಾಜ್ ಅವರಿಗೆ ಸರ್ ಸಿ.ವಿ.ರಾಮನ್ ನಗರ್ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.
ಜೆಡಿಎಸ್ನಿಂದ ಬಂದ ಗಂಗಾವತಿಯ ಇಕ್ಬಾಲ್ ಅನ್ಸಾರಿ, ಪುಲಕೇಶಿನಗರ (ಎಸ್ಸಿ) ಅಖಂಡ ಶ್ರೀನಿವಾಸ ಮೂರ್ತಿ, ಚಾಮರಾಜಪೇಟೆಯ ಝಮೀರ್ ಅಹಮದ್ ಖಾನ್, ಮಾಗಡಿಯ ಎಚ್.ಸಿ.ಬಾಲಕೃಷ್ಣ, ಶ್ರೀರಂಗಪಟ್ಟಣ ರಮೇಶ್ ಬಂಡಿಸಿದ್ದನೇಗೌಡ, ನಾಗಮಂಗಲ ಚೆಲುವರಾಯಸ್ವಾಮಿ ಸೇರಿ ಎಲ್ಲರಿಗೂ ಕಾಂಗ್ರೆಸ್ ಟಿಕೆಟ್ ನೀಡಿದೆ.
218 ಅಭ್ಯರ್ಥಿಗಳ ಪಟ್ಟಿ ಹೀಗಿದೆ
| ಕ್ಷೇತ್ರ | ಅಭ್ಯರ್ಥಿಗಳು | |
| 1 | ನಿಪ್ಪಾಣಿ | ಕಾಕಾಸಾಹೇಬ್ಪಾಟೀಲ್ |
| 2 | ಚಿಕ್ಕೋಡಿ-ಸದಲಗಾ | ಗಣೇಶ್ ಹುಕ್ಕೇರಿ |
| 3 | ಅಥಣಿ | ಮಹೇಶ್ ಈರಣ್ಣಗೌಡ ಕುಮಟಳ್ಳಿ |
| 4 | ಕಾಗವಾಡ್ | ಶ್ರೀಮಂತ್ ಬಾಳಸಾಹೇಬ್ ಪಾಟೀಲ್ |
| 5 | ಕುಡಚಿ (ಎಸ್ಸಿ) | ಅಮಿತ್ ಶಾಮ್ ಘಾಟೆ |
| 6 | ರಾಯಬಾಗ್(ಎಸ್ಸಿ) | ಪ್ರದೀಪ್ ಕುಮಾರ್ ಮಾಳಗಿ |
| 7 | ಹುಕ್ಕೇರಿ | ಎ.ಬಿ.ಪಾಟೀಲ್ |
| 8 | ಅರಬಾವಿ | ಅರವಿಂದ್ ಮಹದೇವ್ ರಾವ್ ದಳವಾಯಿ |
| 9 | ಗೋಕಾಕ್ | ರಮೇಶ್ ಜಾರಕಿಹೋಳಿ |
| 10 | ಯಮಕನಮರಡಿ (ಎಸ್ಟಿ) | ಸತೀಶ್ ಜಾರಕಿಹೊಳಿ |
| 11 | ಬೆಳಗಾವಿ ಉತ್ತರ | ಫಿರೋಜ್ ಸೇಠ್ |
| 12 | ಬೆಳಗಾವಿ ದಕ್ಷಿಣ | ಎಂ.ಡಿ.ಲಕ್ಷ್ಮೀನಾರಾಯಣ |
| 13 | ಬೆಳಗಾವಿ ಗ್ರಾ. | ಲಕ್ಷ್ಮೀ ಹೆಬ್ಬಾಳ್ಕರ್ |
| 14 | ಖಾನಪುರ | ಅಂಜಲಿ ನಿಂಬಾಳ್ಕರ್ |
| 15 | ಬೈಲಹೊಂಗಲ | ಮಹಂತೇಶ್ ಕೌಜಲಗಿ |
| 16 | ಸವದತ್ತಿ ಯಲ್ಲಮ್ಮ | ವಿಶ್ವಾಸ್ ವಸಂತ್ ವೈದ್ಯ |
| 17 | ರಾಮದುರ್ಗ | ಪಿ.ಎಂ.ಅಶೋಕ್ |
| 18 | ಮುದೋಳ್ (ಎಸ್ಸಿ) | ಸತೀಶ್ ಚಿನ್ನಪ್ಪ ಬಂಡಿವಡ್ಡರ್ |
| 19 | ತೆರದಾಳ್ | ಉಮಾಶ್ರೀ |
| 20 | ಜಮಖಂಡಿ | ಸಿದ್ದು ನ್ಯಾಮೇಗೌಡ |
| 21 | ಬಿಳಗಿ | ಜಿ.ಟಿ.ಪಾಟೀಲ್ |
| 22 | ಬಾದಾಮಿ | ಡಾ.ದೇವರಾಜ್ ಪಾಟೀಲ್ |
| 23 | ಬಾಗಲಕೋಟೆ | ಎಚ್.ವೈ.ಮೇಟಿ |
| 24 | ಹುನಗುಂದ | ವಿಜಯಾನಂದ ಕಾಶಪ್ಪನವರ್ |
| 25 | ಮುದ್ದೇಬಿಹಾಳ | ಅಪ್ಪಾಜ್ಜಿನಾಡಗೌಡ |
| 26 | ದೇವರ ಹಿಪ್ಪರಗಿ | ಬಾಪುಗೌಡ ಪಾಟೀಲ್ |
| 27 | ಬಸವನಬಾಗೇವಾಡಿ | ಶಿವಾನಂದ ಪಾಟೀಲ್ |
| 28 | ಬಬಲೇಶ್ವರ್ | ಎಂ.ಬಿ.ಪಾಟೀಲ್ |
| 29 | ಬಿಜಾಪುರ ನಗರ | ಅಬ್ದುಲ್ ಹಮೀದ್ ಮುಶ್ರಫ್ |
| 30 | ಇಂಡಿ | ಯಶವಂತರಾಯಗೌಡ ಪಾಟೀಲ್ |
| 31 | ಅಫ್ಜಲ್ಪುರ | ಎಂ.ವೈ.ಪಾಟೀಲ್ |
| 32 | ಜೇವರ್ಗಿ | ಡಾ.ಅಜಯ್ ಸಿಂಗ್ |
| 33 | ಶಹಪುರ್ (ಎಸ್ಟಿ) | ರಾಜ್ ವೆಂಕಟಪ್ಪ ನಾಯಕ್ |
| 34 | ಶಹಾಪುರ | ಶರಣಬಸಪ್ಪ ದರ್ಶನಾಪುರ |
| 35 | ಯಾದಗಿರ್ | ಡಾ.ಎ.ಬಿ.ಮಲಕರೆಡ್ಡಿ |
| 36 | ಗುರುಮಿಟ್ಕಲ್ | ಬಾಬುರಾವ್ ಚಿಂಚಣಸೂರ್ |
| 37 | ಚಿತ್ತಾಪುರ (ಎಸ್ಸಿ) | ಪ್ರಿಯಾಂಕ್ ಖರ್ಗೆ |
| 38 | ಸೇಡಂ | ಡಾ.ಶರಣ ಪ್ರಕಾಶ್ ಪಾಟೀಲ್ |
| 39 | ಚಿಂಚೋಳಿ (ಎಸ್ಸಿ) | ಡಾ.ಉಮೇಶ್ ಜಾದವ್ |
| 40 | ಗುಲ್ಬರ್ಗ ಗ್ರಾ (ಎಸ್ಸಿ) | ವಿಜಯಕುಮಾರ್ |
| 41 | ಗುಲ್ಬರ್ಗ ದಕ್ಷಿಣ | ಅಲ್ಲಮ ಪ್ರಭುಪಾಟೀಲ್ |
| 42 | ಗುಲ್ಬರ್ಗ ಉತ್ತರ | ಶ್ರೀಮ ಫಾತೀಮಾ ಖಮರುಲ್ಲಾ ಇಸ್ಲಾಂ |
| 43 | ಅಳಂದ | ಬಿ.ಆರ್.ಪಾಟೀಲ್ |
| 44 | ಬಸವಕಲ್ಯಾಣ | ಡಾ.ನಾರಾಯಣ ರಾವ್ |
| 45 | ಹುಮ್ನಾಬಾದ್ | ರಾಜಶೇಖರ್ ಪಾಟೀಲ್ |
| 46 | ಬೀದರ್ ದಕ್ಷಿಣ | ಅಶೋಕ್ ಖೇಣಿ |
| 47 | ಬೀದರ್ | ರಹೀಂ ಖಾನ್ |
| 48 | ಬಾಲ್ಕಿ | ಈಶ್ವರ್ ಖಂಡ್ರೆ |
| 49 | ಔರಾದ್ (ಎಸ್ಸಿ) | ವಿಜಯಕುಮಾರ್ |
| 50 | ರಾಯಚೂರು ಗ್ರಾ(ಎಸ್ಟಿ) | ಬಸವನಗೌಡ |
| 51 | ಮಾನ್ವಿ (ಎಸ್ಟಿ) | ಜಿ.ಹಂಪಾನಾಯಕ್ |
| 52 | ದೇವದುರ್ಗ (ಎಸ್ಟಿ) | ರಾಜಶೇಖರ್ ನಾಯಕ್ |
| 53 | ಲಿಂಗಸೂರು (ಎಸ್ಸಿ) | ದುರ್ಗಪ್ಪ ಹೊಳಗೆರೆ |
| 54 | ಸಿಂಧನೂರು | ಹಂಪನಗೌಡ ಬಾದರ್ಲಿ |
| 55 | ಮಸ್ಕಿ (ಎಸ್ಟಿ) | ಪ್ರತಾಪ್ ಗೌಡ ಪಾಟೀಲ್ |
| 56 | ಕುಷ್ಟಗಿ | ಅಮರೇಗೌಡ ಪಾಟೀಲ್ ಬೈಯ್ಯಾಪುರ |
| 57 | ಕನಕನಗಿರಿ (ಎಸ್ಸಿ) | ಶಿವರಾಜ ತಂಗಡಗಿ |
| 58 | ಗಂಗಾವತಿ | ಇಕ್ಬಾಲ್ ಅನ್ಸಾರಿ |
| 59 | ಯಲಬುರ್ಗ | ಬಸವರಾಜ ರಾಯರೆಡ್ಡಿ |
| 60 | ಕೊಪ್ಪಳ | ರಾಘವೇಂದ್ರ ಹಿಟ್ನಾಳ್ |
| 61 | ಶಿರಹಟ್ಟಿ (ಎಸ್ಸಿ) | ದೊಡ್ಡಮನಿ ರಾಮಕೃಷ್ಣ |
| 62 | ಗದಗ | ಎಚ್.ಕೆ.ಪಾಟೀಲ್ |
| 63 | ರೋಣ | ಜಿ.ಎಸ್.ಪಾಟೀಲ್ |
| 64 | ನರಗುಂದ | ಬಿ.ಆರ್.ಯಾವಗಲ್ |
| 65 | ನವಲಗುಂದ | ವಿನೋದ್ ಕೆ,ಅಸೋಟಿ |
| 66 | ಕುಂದಗಲ್ | ಚೆನ್ನಬಸಪ್ಪ ಶಿವಳ್ಳಿ |
| 67 | ಧಾರವಾಡ | ವಿನಯ್ ಕುಲಕರ್ಣಿ |
| 68 | ಹು-ಧಾ ಪೂರ್ವ (ಎಸ್ಸಿ) | ಪ್ರಸಾದ್ ಅಬ್ಬಯ್ಯ |
| 69 | ಹು-ಧಾ ಕೇಂದ್ರ | ಡಾ.ಮಹೇಶ್ ಸಿ.ನಲ್ವಾಡ್ |
| 70 | ಹು-ಧಾ ಪಶ್ಚಿಮ | ಮೊಹಮ್ಮದ್ ಇಸ್ಮಾಯಿಲ್ |
| 71 | ಕಲಗಟಗಿ | ಸಂತೋಷ್ ಲಾಡ್ |
| 72 | ಹಳಿಯಾಳ | ಆರ್.ವಿ.ದೇವರಾಜ್ |
| 73 | ಕಾರಾವಾರ | ಸತೀಶ್ ಶೈಲ್ |
| 74 | ಕುಮಟಾ | ಶಾರದಾ ಮೋಹನ್ ಶೆಟ್ಟಿ |
| 75 | ಭಟ್ಕಳ | ಮಂಕಾಳ ಸುಬ್ಬಾ ವೈದ್ಯ |
| 76 | ಶಿರಸಿ | ಭೀಮಾನಾಯಕ್ |
| 77 | ಯಲ್ಲಾಪುರ | ಅರೆ ಬೈಲ್ ಹೆಬ್ಬಾರ್ ಶಿವರಾಮ್ |
| 78 | ಹಾನಗಲ್ | ಮಾನೆ ಶ್ರೀನಿವಾಸ |
| 79 | ಶಿಗ್ಗಾವ್ | ಸೈಯದ್ ಅಝಂಫಿರ್ ಖಾದ್ರಿ |
| 80 | ಹಾವೇರಿ (ಎಸ್ಸಿ) | ರುದ್ರಪ್ಪ ಮಾನಪ್ಪ ಲಮಾಣಿ |
| 81 | ಬ್ಯಾಡಗಿ | ಎಸ್.ಆರ್.ಪಾಟೀಲ್ |
| 82 | ಹಿರೆಕೇರೆರೂರು | ಬಿ.ಸಿ.ಪಾಟೀಲ್ |
| 83 | ರಾಣೆಬೆನ್ನೂರು | ಕೆ.ಬಿ.ಕೋಳಿವಾಡ |
| 84 | ಹಡಗಲಿ (ಎಸ್ಸಿ) | ಪರಮೇಶ್ವರ್ ನಾಯಕ್ |
| 85 | ಹಗರಿಬೊಮ್ಮನಹಳ್ಳಿ(ಎಸ್ಸಿ) | ಎಲ್.ಬಿ.ಪಿ.ಭೀಮಾನಾಯಕ್ |
| 86 | ವಿಜಯಪುರ | ಆನಂದ್ ಸಿಂಗ್ |
| 87 | ಕಂಪ್ಲಿ (ಎಸ್ಟಿ) | ಜೆ.ಎನ್.ಗಣೇಶ್ |
| 88 | ಶಿರಗುಪ್ಪ (ಎಸ್ಟಿ) | ಮುರಳಿ ಕೃಷ್ಣ |
| 89 | ಬಳ್ಳಾರಿ (ಎಸ್ಟಿ) | ಬಿ.ನಾಗೇಂದ್ರ |
| 90 | ಬಳ್ಳಾರಿ ನಗರ | ಅನಿಲ್ ಲಾಡ್ |
| 91 | ಸಂಡೂರು (ಎಸ್ಟಿ) | ತುಕರಾಮ್ |
| 92 | ಕುಡ್ಲಗಿ (ಎಸ್ಟಿ) | ರಾಘು ಗುಜ್ಜಾಲ್ |
| 93 | ಮೊಳಕಾಲ್ಮೂರು(ಎಸ್ಟಿ) | ಡಾ.ಬಿ.ಯೋಗೇಶ್ ಬಾಬು |
| 94 | ಚಳ್ಳಕೆರೆ | ಟಿ.ರಘುಮೂರ್ತಿ |
| 95 | ಚಿತ್ರದುರ್ಗ | ಡಾ.ಎಚ್.ಎ.ಶಣ್ಮುಖಪ್ಪ |
| 96 | ಹಿರಿಯೂರು | ಡಾ.ಸುಧಾಕರ್ |
| 97 | ಹೊಸದುರ್ಗ | ಬಿ.ಜಿ.ಗೋವಿಂದಪ್ಪ |
| 98 | ಹೊಳಲ್ಕೆರೆ (ಎಸ್ಸಿ) | ಎಚ್.ಆಂಜನೇಯ |
| 99 | ಜಗಳೂರು (ಎಸ್ಟಿ) | ಶ್ರೀಮತಿ ಎ.ಎಲ್.ಪುಷ್ಪಾ |
| 100 | ಹರಪನಹಳ್ಳಿ | ಎಂ.ಪಿ.ರವೀಂದ್ರ |
| 101 | ಹರಿಹರ | ಎಸ್.ರಾಮಪ್ಪ |
| 102 | ದಾವಣಗೆರೆ ಉತ್ತರ | ಎಸ್.ಎಸ್.ಮಲ್ಲಿಕಾರ್ಜುನ್ |
| 103 | ದಾವಣಗೆರೆ ದಕ್ಷಿಣ | ಶಾಮನೂರು ಶಿವಶಂಕರಪ್ಪ |
| 104 | ಮಾಯಕೊಂಡ (ಎಸ್ಸಿ) | ಕೆ.ಎಸ್.ಬಸವರಾಜಪ್ಪ |
| 105 | ಚೆನ್ನಗಿರಿ | ವಡ್ನಾಳ್ ರಾಜಣ್ಣ |
| 106 | ಹೊನ್ನಾಳಿ | ಡಾ.ಜಿ.ಶಾಂತನಗೌಡ |
| 107 | ಶಿವಮೊಗ್ಗ ಗ್ರಾ (ಎಸ್ಸಿ) | ಡಾ.ಎಸ್.ಕೆ.ಶ್ರೀನಿವಾಸ ಕರಿಯಣ್ಣ |
| 108 | ಭದ್ರಾವತಿ | ಬಿ.ಕೆ.ಸಂಗಮೇಶ್ವರ |
| 109 | ಶಿವಮೊಗ್ಗ | ಕೆ.ಬಿ.ಪ್ರಸನ್ನಕುಮಾರ್ |
| 110 | ತೀರ್ಥಹಳ್ಳಿ | ಕಿಮ್ಮನ್ನೆ ರತ್ನಾಕರ್ |
| 111 | ಶಿಕಾರಿಪುರ | ಜಿ.ಬಿ.ಮಾಲತೇಶ್ |
| 112 | ಸೊರಬ | ರಾಜು ಎಂ. ಥಲ್ಲೂರು |
| 113 | ಸಾಗರ | ಕಾಗೋಡು ತಿಮ್ಮಪ್ಪ |
| 114 | ಬೈಂದೂರು | ಕೆ.ಗೋಪಾಲ್ ಪೂಜಾರಿ |
| 115 | ಕುಂದಾಪುರ | ರಾಕೇಶ್ ಮಲ್ಲಿ |
| 116 | ಉಡುಪಿ | ಪ್ರಮೋದ್ ಮದ್ವರಾಜ್ |
| 117 | ಕಾಪು | ವಿನಯ್ ಕುಮಾರ್ ಸೋರಕೆ |
| 118 | ಕಾರ್ಕಳ | ಎಚ್.ಗೋಪಾಲ್ ಬಂಡಾರಿ |
| 119 | ಶೃಂಗೇರಿ | ಟಿ.ಡಿ.ರಾಜೇಗೌಡ |
| 120 | ಮೂಡಿಗೆರೆ (ಎಸ್ಸಿ) | ಶ್ರೀಮತಿ ಮೋಟಮ್ಮ |
| 121 | ಚಿಕ್ಕಮಗಳೂರು | ಡಾ.ಬಿ.ಎಲ್.ಶಂಕರ್ |
| 122 | ತರಿಕೆರೆ | ಎಸ್.ಎಂ.ನಾಗರಾಜು |
| 123 | ಕಡೂರು | ಕೆ.ಎಸ್.ಆನಂದ |
| 124 | ಚಿಕ್ಕನಾಯಕನಹಳ್ಳಿ | ಸಂತೋಷ್ ಜಯಚಂದ್ರ |
| 125 | ತಿಪಟೂರು | ಬಿ.ನಂಜಾಮರಿ |
| 126 | ತುರುವೇಕೆರೆ | ಚೌದ್ರಿ ರಂಗಪ್ಪ |
| 127 | ಕುಣಿಗಲ್ | ಡಾ.ಎಚ್.ಡಿ.ರಂಗನಾಥ್ |
| 128 | ತುಮಕೂರು ನಗರ | ಡಾ.ರಫೀಕ್ ಅಹಮದ್ |
| 129 | ತುಮಕೂರು ಗ್ರಾ. | ಆರ್.ಎಸ್.ರವಿಕುಮಾರ್ |
| 130 | ಕೊರಟಗೆರೆ | ಡಾ.ಜಿ.ಪರಮೇಶ್ವರ್ |
| 131 | ಗುಬ್ಬಿ | ಕುಮಾರ್ ಕೆ |
| 132 | ಶಿರಾ | ಟಿ.ಬಿ.ಜಯಚಂದ್ರ |
| 133 | ಪಾವಗಡ | ವೆಂಕಟರವಣಪ್ಪ |
| 134 | ಮಧುಗಿರಿ | ಕೆ.ಎನ್.ರಾಜಣ್ಣ |
| 135 | ಗೌರಿಬಿದನೂರು | ಎನ್.ಎಚ್.ಶಿವಶಂಕರ ರೆಡ್ಡಿ |
| 136 | ಬಾಗೇಪಲ್ಲಿ | ಎಸ್.ಎನ್.ಸುಬ್ಬಾರೆಡ್ಡಿ |
| 137 | ಚಿಕ್ಕಬಳ್ಳಾಪುರು | ಡಾ.ಸುಧಾಕರ್ |
| 138 | ಶಿಡ್ಲಗಟ್ಟ | ವಿ.ಮುನಿಯಪ್ಪ |
| 139 | ಚಿಂತಾಮಣಿ | ಶ್ರೀಮತಿ ವಾಣಿ ಕೃಷ್ಣರೆಡ್ಡಿ |
| 140 | ಶ್ರೀನಿವಾಸಪುರ | ರಮೇಶ್ ಕುಮಾರ್ |
| 141 | ಮುಳಬಾಗಿಲು (ಎಸ್ಸಿ) | ಜಿ.ಮಂಜುನಾಥ್ |
| 142 | ಕೆ.ಜಿ.ಎಫ್ (ಎಸ್ಸಿ) | ರೂಪಾ |
| 143 | ಬಂಗಾರಪೇಟೆ(ಎಸ್ಸಿ) | ನಾರಾಯಣಸ್ವಾಮಿ |
| 144 | ಕೋಲಾರ | ಸೈಯದ್ ಝಮೀರ್ ಪಾಶಾ |
| 145 | ಮಾಲೂರು | ಕೆ.ವೈ.ನಂಜೇಗೌಡ |
| 146 | ಯಲಹಂಕ | ಎಂ.ಎನ್.ಗೋಪಾಲಕೃಷ್ಣ |
| 147 | ಕೆ.ಆರ್.ಪುರಂ | ಬಿ.ಎ.ಬಸವರಾಜ್ |
| 148 | ಬ್ಯಾಟರಾಯನಪುರ | ಕೃಷ್ಣಬೈರೇಗೌಡ |
| 149 | ಯಶವಂತಪುರ | ಎಸ್.ಟಿ.ಸೋಮಶೇಖರ್ |
| 150 | ರಾಜರಾಜೇಶ್ವರಿ ನಗರ | ಮುನಿರತ್ನ |
| 151 | ದಾಸರಹಳ್ಳಿ | ಪಿ.ಎನ್.ಕೃಷ್ಣಮೂರ್ತಿ |
| 152 | ಮಹಾಲಕ್ಷ್ಮೀ ಲೇಔಟ್ | ಎಚ್.ಎಸ್.ಮಂಜುನಾಥ್ |
| 153 | ಮಲ್ಲೇಶ್ವರಂ | ಎಂ.ಆರ್.ಸೀತಾರಾಂ |
| 154 | ಹೆಬ್ಬಾಳ | ಬಿ.ಎಸ್.ಸುರೇಶ್ |
| 155 | ಪುಲಕೇಶಿನಗರ (ಎಸ್ಸಿ) | ಅಖಂಡ ಶ್ರೀನಿವಾಸ ಮೂರ್ತಿ |
| 156 | ಸರ್ವಜ್ಞ ನಗರ | ಕೆ.ಜೆ.ಜಾರ್ಜ್ |
| 157 | ಸಿ.ವಿ.ರಾಮನ್ನಗರ್ (ಎಸ್ಸಿ) | ಸಂಪತ್ ರಾಜ್ |
| 158 | ಶಿವಾಜಿನಗರ | ರೋಷನ್ ಬೇಗ್ |
| 159 | ಗಾಂಧಿನಗರ | ದಿನೇಶ್ ಗುಂಡುರಾವ್ |
| 160 | ರಾಜಾಜಿನಗರ | ಶ್ರೀಮತಿ ಪದ್ಮಾವತಿ |
| 161 | ಗೋವಿಂದರಾಜನಗರ | ಪ್ರಿಯಾಕೃಷ್ಣ |
| 162 | ವಿಜಯನಗರ | ಎಂ.ಕೃಷ್ಣಪ್ಪ |
| 163 | ಚಾಮರಾಜಪೇಟೆ | ಝಮೀರ್ ಅಹಮದ್ ಖಾನ್ |
| 164 | ಚಿಕ್ಕಪೇಟೆ | ಆರ್.ವಿ.ದೇವರಾಜ್ |
| 165 | ಬಸವನಗುಡಿ | ಎಂ.ಬೋರೆಗೌಡ |
| 166 | ಪದ್ಮನಾಭನಗರ | ಬಿ.ಗುರ್ರಪ್ಪನಾಯ್ಡು |
| 167 | ಬಿ.ಟಿ.ಎಂ.ಲೇಔಟ್ | ರಾಮಲಿಂಗಾರೆಡ್ಡಿ |
| 168 | ಜಯನಗರ | ಸೌಮ್ಯರೆಡ್ಡಿ |
| 169 | ಮಹದೇವಪುರ | ಎ.ಸಿ.ಶ್ರೀನಿವಾಸ್ |
| 170 | ಬೊಮ್ಮನಹಳ್ಳಿ | ಸುಷ್ಮಾರಾಜಗೋಪಾಲ ರೆಡ್ಡಿ |
| 171 | ಬೆಂಗಳೂರು ದಕ್ಷಿಣ | ಆರ್.ಕೆ.ರಮೇಶ್ |
| 172 | ಆನೇಕಲ್ (ಎಸ್ಸಿ) | ಬಿ.ಶಿವಣ್ಣ |
| 173 | ಹೊಸಕೋಟೆ | ಎಂಟಿಬಿ ನಾಗರಾಜ್ |
| 174 | ದೇವನಹಳ್ಳಿ (ಎಸ್ಸಿ) | ವೆಂಕಟಸ್ವಾಮಿ |
| 175 | ದೊಡ್ಡಬಳ್ಳಾಪುರ | ಟಿ.ವೆಂಕಟರಮಣಯ್ಯ |
| 176 | ನೆಲಮಂಗಲ(ಎಸ್ಸಿ) | ಆರ್.ನಾರಾಯಣಸ್ವಾಮಿ |
| 177 | ಮಾಗಡಿ | ಎಚ್.ಸಿ.ಬಾಲಕೃಷ್ಣ |
| 178 | ರಾಮನಗರ | ಎಚ್.ಎ.ಇಕ್ಬಾಲ್ ಹುಸೈನ್ |
| 179 | ಕನಕಪುರ | ಡಿ.ಕೆ.ಶಿವಕುಮಾರ್ |
| 180 | ಚನ್ನಪಟ್ಟಣ್ಣ | ಎಚ್.ಎಂ.ರೇವಣ್ಣ |
| 181 | ಮಳ್ಳವಳ್ಳಿ (ಎಸ್ಸಿ) | ಪಿ.ಎಂ.ನರೇಂದ್ರಸ್ವಾಮಿ |
| 182 | ಮದ್ದೂರು | ಜಿ.ಎಂ.ಮಧು |
| 183 | ಮಂಡ್ಯ | ಅಂಬರೀಶ್ |
| 184 | ಶ್ರೀರಂಗಪಟ್ಟಣ | ರಮೇಶ್ ಬಂಡಿಸಿದ್ದನೇಗೌಡ |
| 185 | ನಾಗಮಂಗಲ | ಚೆಲುವರಾಯಸ್ವಾಮಿ |
| 186 | ಕೃಷ್ಣರಾಜಪೇಟೆ | ಕೆ.ಬಿ.ಚಂದ್ರಶೇಖರ್ |
| 187 | ಶ್ರವಣಬೆಳಗೋಳ | ಸಿ.ಎಸ್.ಪುಟ್ಟೇಗೌಡ |
| 188 | ಅರಸೀಕೆರೆ | ಜಿ.ಬಿ.ಶಶಿಧರ್ |
| 189 | ಬೇಲೂರು | ಶ್ರೀಮತಿ ಕೀರ್ತನಾ ರುದ್ರೇಗೌಡ |
| 190 | ಹಾಸನ | ಮಹೇಶ್ ಎಚ್.ಕೆ. |
| 191 | ಹೊಳೆನರಸೀಪುರ | ಮಂಜೇಗೌಡ |
| 192 | ಅರಕಲಗೋಡು | ಎ.ಮಂಜು |
| 193 | ಸಕಲೇಶಪುರ(ಎಸ್ಸಿ) | ಸಿದ್ದಯ್ಯ |
| 194 | ಬೆಳ್ತಂಗಡಿ | ಕೆ.ವಸಂತಬಂಗೇರಾ |
| 195 | ಮೂಡಬಿದರೆ | ಕೆ.ಅಭಯಚಂದ್ರ ಜೈನ್ |
| 196 | ಮಂಗಳೂರು ಉತ್ತರ | ಬಿ.ಎ.ಮೊಯಿದ್ದಿನ್ ಬಾವ |
| 197 | ಮಂಗಳೂರು ದಕ್ಷಿಣ | ಜೆ.ಆರ್.ಲೋಬೋ |
| 198 | ಮಂಗಳೂರು | ಯು.ಟಿ.ಖಾದರ್ |
| 199 | ಬಂಡ್ವಾಳ | ರಮಾನಾಥ್ ರೈ |
| 200 | ಪುತ್ತೂರು | ಶ್ರೀಮತಿ ಶಕುಂತಾಲಾ ಶೆಟ್ಟಿ |
| 201 | ಸುಳ್ಯ (ಎಸ್ಸಿ) | ಡಾ.ಬಿ.ರಾಘು |
| 202 | ಮಡಕೇರಿ | ಎಚ್.ಎಸ್.ಚಂದ್ರಾ ಮೂಲಿ |
| 203 | ವಿರಾಜಪೇಟೆ | ಸಿ.ಎಸ್.ಅರುಣ್ ಮಾಚಯ್ಯ |
| 204 | ಪಿರಿಯಾಪಟ್ಟಣ | ಕೆ.ವೆಂಕಟೇಶ್ |
| 205 | ಕೃಷ್ಣರಾಜನಗರ | ಡಾ.ರವಿಶಂಕರ್ |
| 206 | ಹುಣಸೂರು | ಎಚ್.ಪಿ.ಮಂಜುನಾಥ್ |
| 207 | ಹೆಗ್ಗಡದೇವನಕೋಟೆ (ಎಸ್ಟಿ) | ಅನಿಲ್ ಕುಮಾರ್ ಸಿ |
| 208 | ನಂಜನಗೂಡು (ಎಸ್ಸಿ) | ಕಹಳೆ ಕೃಷ್ಣಮೂರ್ತಿ |
| 209 | ಚಾಮುಂಡೇಶ್ವರಿ | ಸಿದ್ದರಾಮಯ್ಯ |
| 210 | ಕೃಷ್ಣರಾಜ | ಎಂ.ಕೆ.ಸೋಮಶೇಖರ್ |
| 211 | ಚಾಮರಾಜ | ವಾಸು |
| 212 | ನರಸಿಂಹರಾಜ | ತನ್ನಿರ್ ಸೆಠ್ |
| 213 | ವರುಣ | ಡಾ.ಯತೀಂದ್ರ |
| 214 | ಟಿ.ನರಸೀಪುರ(ಎಸ್ಸಿ) | ಎಚ್.ಸಿ.ಮಹದೇವಪ್ಪ |
| 215 | ಹನ್ನೂರು | ಆರ್.ನರೇಂದ್ರ |
| 216 | ಕೊಳ್ಳೆಗಾಲ (ಎಸ್ಸಿ) | ಎ.ಆರ್.ಕೃಷ್ಣಮೂರ್ತಿ |
| 217 | ಚಾಮರಾಜನಗರ | ಪಾಂಡುರಂಗ ಶೆಟ್ಟಿ |
| 218 | ಗುಂಡ್ಲುಪೇಟೆ | ಗೀತಾ ಮಹದೇವ ಪ್ರಸಾದ್ |






