ರೈಲು ಡಿಕ್ಕಿ ನಾಲ್ಕು ಆನೆಗಳು ಮೃತ:

ಜಾರ್ಸುಗುಡಾ, ಏ.16-ರೈಲು ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ಆನೆಗಳು ಮೃತಪಟ್ಟ ಘಟನೆ ಒಡಿಶಾದ ಜಾರ್ಸುಗುಡಾ ಜಿಲ್ಲೆಯ ಬಗಾದಿಹಿ ಅರಣ್ಯ ವಲಯ ಪ್ರದೇಶದಲ್ಲಿ ಲೆವೆಲ್ ಕ್ರಾಸಿಂಗ್‍ನಲ್ಲಿ ಇಂದು ಸಂಭವಿಸಿದೆ.
ಮುಂಜಾನೆ ತೆಲದಿಹಿ ಬಳಿ ಹೌರಾ-ಮುಂಬೈ ರೈಲು ಮಾರ್ಗದ ಹಳಿಯನ್ನು ದಾಟುತ್ತಿದ್ದ ಆನೆಗಳಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿತು. ಎರಡು ಹೆಣ್ಣಾನೆಗಳೂ ಸೇರಿದಂತೆ ನಾಲ್ಕು ಆನೆಗಳು ಮೃತಪಟ್ಟಿವೆ ಎಂದು ಅರಣ್ಯಾಧಿಕಾರಿ ಪಿ.ಕೆ.ದಳ್ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ