ಅತ್ಯಾಚಾರ ಕೃತ್ಯಗಳನ್ನು ಖಂಡಿಸಿ ಬಾಲಿವುಡ್ ಪ್ರಮುಖ ತಾರೆಯರು ಮುಂಬೈನಲ್ಲಿ ಪ್ರತಿಭಟನೆ:

ಮುಂಬೈ, ಏ.16-ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಕತುವಾ, ಉನ್ನಾವೋ ಮತ್ತು ಸೂರತ್ ಅತ್ಯಾಚಾರ ಕೃತ್ಯಗಳನ್ನು ಖಂಡಿಸಿ ಬಾಲಿವುಡ್ ಪ್ರಮುಖ ತಾರೆಯರು ಮುಂಬೈನಲ್ಲಿ ಪ್ರತಿಭಟನೆ ನಡೆಸಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು.
ಹಿಂದಿ ಚಿತ್ರರಂಗದ ತಾರೆಯರಾದ ಅಕ್ಷಯ್ ಕುಮಾರ್, ಟ್ವಿಂಕಲ್ ಖನ್ನಾ, ರಾಜಕುಮಾರ್ ರಾವ್, ಕಲ್ಕಿ ಕೋಯಿಚ್ಲಿನ್, ಕಿರಣ್ ರಾವ್, ಹಿರಿಯ ನಟಿ ಹೆಲೆನ್ ಸೇರಿದಂತೆ ಅನೇಕ ನಟ-ನಟಿಯರು, ವಿವಿಧ ಕ್ಷೇತ್ರಗಳ ಖ್ಯಾತನಾಮರು ಮುಂಬೈನ ಕಾರ್ಟರ್ ರಸ್ತೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಅದಿತಿ ರಾವ್ ಹೈದರಿ, ಪತ್ರಲೇಖಾ, ಸಮೀರಾ ರೆಡ್ಡಿ, ಗಾಯಕರಾದ ಸೋನಾ ಮಹಾಪಾತ್ರ, ಅನುಷ್ಕಾ ಮನ್‍ಚಂದಾ, ಸಂಗೀತ ನಿರ್ದೇಶಕ ವಿಶಾಲ್ ಡಡ್ಲಾನಿ ಮೊದಲಾದವರೂ ಸಹ ಧರಣಿಯಲ್ಲಿ ಭಾಗವಹಿಸಿ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಪ್ರಸ್ತತು ಐರ್ಲೆಂಡ್‍ನಲ್ಲಿ ಶೂಟಿಂಗ್‍ನಲ್ಲಿರುವ ಬಾಲಿವುಡ್-ಹಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಟ್ವಟರ್‍ನಲ್ಲಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ