ಬ್ಯಾಗ್ ಕಸಿದು ಓಡುತ್ತಿದ್ದ ಮೂವರು ದುಷ್ಕರ್ಮಿಗಳ, ಸಾರ್ವಜನಿಕರು ಹಿಡಿದು ಥಳಿಸಿ ಪೆÇಲೀಸರಿಗೆ ಒಪ್ಪಿಸಿದ್ದಾರೆ:

ಮಂಡ್ಯ, ಏ.13- ಅಡವಿಟ್ಟ ಚಿನ್ನಾಭರಣ ಬಿಡಿಸಿಕೊಂಡು ಬ್ಯಾಂಕ್‍ನಿಂದ ಹೊರ ಬಂದ ವ್ಯಕ್ತಿಯನ್ನು ಹಿಂಬಾಲಿಸಿ ಬ್ಯಾಗ್ ಕಸಿದು ಓಡುತ್ತಿದ್ದ ಮೂವರು ದುಷ್ಕರ್ಮಿಗಳಲ್ಲಿ ಒಬ್ಬನನ್ನು ಸಾರ್ವಜನಿಕರೆ ಹಿಡಿದು ಥಳಿಸಿ ಪೆÇಲೀಸರಿಗೆ ಒಪ್ಪಿಸಿದ ಘಟನೆ ನಗರದಲ್ಲಿ ನಡೆದಿದೆ.
ನಿನ್ನೆ ಮಧ್ಯಾಹ್ನ 3 ಗಂಟೆಯಲ್ಲಿ ನಗರದ ಪ್ರಕಾಶ್ ಎಂಬುವರು ಆರ್.ಪಿ.ರಸ್ತೆಯಲ್ಲಿರುವ ಕಾಪೆರ್Çೀರೇಷನ್ ಬ್ಯಾಂಕ್‍ನಿಂದ ಅಡವಿಟ್ಟಿದ್ದ ಚಿನ್ನಾಭರಣ ಬಿಡಿಸಿಕೊಂಡು ಮನೆಗೆ ಹೊರಟಿದ್ದರು.
ಆಂಧ್ರ ಮೂಲದ ಮೂವರು ಪ್ರಕಾಶ್ ಅವರನ್ನು ಹಿಂಬಾಲಿಸಿ ಬ್ಯಾಗ್ ಕಿತ್ತುಕೊಂಡಿದ್ದಾರೆ. ಜೋರಾಗಿ ಕೂಗಿಕೊಂಡಾಗ ಮೂವರು ಓಡಿದ್ದಾರೆ. ಸಾರ್ವಜನಿಕರು ಚೇಸ್ ಮಾಡಿ ಒಬ್ಬನನ್ನು ಹಿಡಿದು ಥಳಿಸಿ ಪೆÇಲೀಸರಿಗೆ ಒಪ್ಪಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿರುವ ಪಶ್ಚಿಮ ಠಾಣೆ ಪೆÇಲೀಸರು ಬಂಧಿತನ ವಿಚಾರಣೆ ನಡೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ