ಕಾವೇರಿ ನಿರ್ವಹಣಾಮಂಡಳಿ ರಚಿಸುವಂತೆ ಒತ್ತಾಯ ಹಿನ್ನಲೆ: ರಜನಿಕಾಂತ್, ಕಮಲ ಹಾಸನ್ ನಟನೆಯ ಚಲನಚಿತ್ರಗಳನ್ನು ರಾಜ್ಯದಲ್ಲಿ ನಿಷೇಧಿ¸ಲು ರಕ್ಷಣಾ ವೇದಿಕೆ ಒತ್ತಾಯ

ಬೆಂಗಳೂರು,ಏ.13-ಕಾವೇರಿ ನಿರ್ವಹಣಾಮಂಡಳಿ ರಚಿಸುವಂತೆ ಒತ್ತಾಯಿಸಿರುವ ಖ್ಯಾತ ನಟರಾದ ರಜನಿಕಾಂತ್, ಕಮಲ ಹಾಸನ್ ನಟನೆಯ ಚಲನಚಿತ್ರಗಳನ್ನು ನಮ್ಮ ರಾಜ್ಯದಲ್ಲಿ ನಿಷೇಧಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಒತ್ತಾಯಿಸಿದರು.

ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ಕಾವೇರಿ ನಿರ್ವಹಣಾ ಮಂಡಳಿಯನ್ನು ಕೇಂದ ಸರ್ಕಾರ ರಚನೆ ಮಾಡಬಾರದೆಂದು ಆಗ್ರಹಿಸಿ ಇಂದು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಅನಾವಶ್ಯಕವಾಗಿ ತಮಿಳುನಾಡಿನಲ್ಲಿ ರಾಜಕಾರಣಿಗಳು ಹಾಗೂ ಸಿನಿಮಾ ನಟರು ಕಾವೇರಿ ಕ್ಯಾತೆ ತೆಗೆದಿದ್ದಾರೆ. ಈ ಬಗ್ಗೆ ಚಕಾರ ವೆತ್ತದ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.
ಕರ್ನಾಟಕ ರಾಜ್ಯಕ್ಕೆ ಮರಣ ಶಾಸನವಾಗಿರುವ ಕಾವೇರಿ ನಿರ್ವಹಣಾಮಂಡಳಿಯನ್ನು ರಚನೆ ಮಾಡಬಾರದೆಂದು ಆಗ್ರಹಿಸಿದರು.

ರಾಜ್ಯದಲ್ಲಿರುವ ಡ್ಯಾಮ್‍ಗಳನ್ನು ನಮ್ಮ ರಾಜರು ಕಟ್ಟಿಸಿದ್ದು ಅವುಗಳನ್ನು ಕೇಂದ್ರ ಸರ್ಕಾರದ ಅಧೀನಕ್ಕೆ ಕೊಡುವುದನ್ನು ನಾವು ಒಪ್ಪುವುದಿಲ್ಲ ಎಂದು ಎಂದರು.
ಪ್ರತಿಭಟನೆಯಲ್ಲಿ ಆಂಜಿನಪ್ಪ , ಚೇತನ್, ಸಣ್ಣವೀರಪ್ಪ , ಗೋವಿಂದ ಮೂರ್ತಿ ಎಸ್.ಯಾದವ್ ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ