ಲೋಕ ಅವಾಸದಳದ ರಾಜ್ಯಾಧ್ಯಕರಾಗಿ ನಿವೃತ್ತ ಪೊಲೀಸ್ ಆಯುಕ್ತ ಪಿ.ಕೋದಂಡರಾಮಯ್ಯ ಆಯ್ಕೆ

ಬೆಂಗಳೂರು, ಏ.13-ಲೋಕ ಅವಾಸದಳದ ರಾಜ್ಯಾಧ್ಯಕ್ಷರನ್ನಾಗಿ ನಿವೃತ್ತ ಪೆÇಲೀಸ್ ಆಯುಕ್ತರಾದ ಪಿ.ಕೋದಂಡರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಲೋಕ ಆವಾಸದಳದ ಶಂಭು ಶ್ರೀವಾತ್ಸವ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಲೋಕ ಆವಾಸದಳದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಈ ಪಕ್ಷವನ್ನು 2012ರಲ್ಲಿ ಸಂಘಟಿಸಲಾಗಿದೆ. ಜನತಾದಳ(ಶರದ್‍ಯಾದವ್) ಇವರೊಂದಿಗೆ ನಮ್ಮ ಪಕ್ಷವನ್ನು ಸಂಯೋಜಿಸಲಾಗಿದೆ. ಪ್ರಧಾನಕಾರ್ಯದರ್ಶಿಯಾಗಿ ಜೀ.ವಿ.ರಾಮಚಂದ್ರಯ್ಯ ಹಾಗೂ ಗೋಪಾಲ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ