ಹಣ ವಸೂಲಿ ಮಾಡುತ್ತಿದ್ದರೆಂಬ ಆರೋಪದ ಮೇಲೆ ಮೂವರು ಪೆÇಲೀಸರ ಅಮಾನತು :

ಕೋಲಾರ, ಏ.12-ಚುನಾವಣೆ ಹಿನ್ನೆಲೆಯಲ್ಲಿ ನಿರ್ಮಿಸಲಾಗಿರುವ ಚೆಕ್‍ಪೆÇೀಸ್ಟ್ ಬಳಿ ಹಣ ವಸೂಲಿ ಮಾಡುತ್ತಿದ್ದರೆಂಬ ಆರೋಪದ ಮೇಲೆ ಮೂವರು ಪೆÇಲೀಸರನ್ನು ಅಮಾನತು ಮಾಡಿ ಕೆಜಿಎಫ್ ಎಸ್‍ಪಿ ಲೋಕೇಶ್ ಕುಮಾರ್ ಆದೇಶಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆಗಾಗಿ ಬಂಗಾರಪೇಟೆ ತಾಲ್ಲೂಕಿನ ದಿಂಬ ಬಳಿ ಚೆಕ್‍ಪೆÇೀಸ್ಟ್ ನಿರ್ಮಿಸಲಾಗಿದೆ. ಈ ಚೆಕ್‍ಪೆÇೀಸ್ಟ್ ಬಳಿ ಕಳೆದ ನಾಲ್ಕೈದು ದಿನಗಳಿಂದ ಪೆÇಲೀಸರು ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿದ್ದರೆಂಬ ಆರೋಪ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ವರದಿ ಪಡೆದಿದ್ದ ಕೆಜಿಎಫ್ ಎಸ್‍ಪಿ ಲೋಕೇಶ್‍ಕುಮಾರ್ ಅವರು ತನಿಖೆ ನಡೆಸಿ, ಎಎಸ್‍ಐ ರವೀಂದ್ರ, ಕಾನ್‍ಸ್ಟೇಬಲ್ ಬಾಲಾಜಿಸಿಂಗ್ ಹಾಗೂ ಡಿಎಆರ್ ಕಾನ್‍ಸ್ಟೇಬಲ್ ಎಂ.ರವೀಂದ್ರ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ