ಬಿಜೆಪಿ ಪರ ಕ್ರಿಕೆಟ್‍ಗಾರರಾದ ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್ ಪ್ರಚಾರ

ಬೆಂಗಳೂರು,ಏ.12-ಚುನಾವಣೆಯಲ್ಲಿ ಶತಾಯಗತಾಯ ಗೆಲುವು ಪಡೆದೇ ತೀರಬೇಕೆಂದು ಪಣ ತೊಟ್ಟಿರುವ ಬಿಜೆಪಿ ಯುವಜನತೆಯನ್ನು ತನ್ನತ್ತ ಸೆಳೆಯಲು ಮಾಜಿ ಕ್ರಿಕೆಟ್‍ಗಾರರಾದ ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್ ಅವರನ್ನು ರಾಜಕಾರಣಕ್ಕೆ ಬಳಸಿಕೊಳ್ಳಲು ಕಸರತ್ತು ನಡೆಸುತ್ತಿದೆ.

ಕಳೆದ ಎರಡು ವಾರಗಳಿಂದ ಈ ಕೆಲಸದಲ್ಲಿ ನಿರತವಾಗಿರುವ ಬಿಜೆಪಿ ಯಾವುದೇ ವಿವಾದವಿಲ್ಲದ ಕುಂಬ್ಳೆ ಹಾಗೂ ದ್ರಾವಿಡ್ ಜೊತೆ ಅನೇಕ ಸುತ್ತಿನ ಮಾತುಕತೆ ಕೂಡ ನಡೆಸಿದೆ ಎಂದು ಹೇಳಲಾಗಿದೆ.

ಇಬ್ಬರಲ್ಲಿ ಒಬ್ಬರನ್ನು ರಾಜ್ಯಸಭೆ ಹಾಗೂ ಇನ್ನೊಬ್ಬರನ್ನು ಲೋಕಸಭೆ ಚುನಾವಣೆಗೆ ಇಳಿಸುವ ಪ್ರಯತ್ನದಲ್ಲಿದ್ದರೂ ಈ ಇಬ್ಬರೂ ಆಟಗಾರರು ರಾಜಕೀಯದಿಂದ ದೂರವುಳಿಯಲು ನಿರ್ಧರಿಸಿ ಬಿಜೆಪಿ ಆಹ್ವಾನವನ್ನು ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ