ತಂದೆಯ ಪರ ಮತ ಯಾಚನೆಗೆ ಬಂದ ಶಾಸಕ ಸುರೇಶ್ ಗೌಡ ಅವರ ಪುತ್ರಿಗೆ ಗ್ರಾಮಸ್ಥರು ಹಿಗ್ಗಾಮಗ್ಗಾ ಕ್ಲಾಸ್

ತುಮಕೂರು, ಏ.12-ತಂದೆಯ ಪರ ಮತ ಯಾಚನೆಗೆ ಬಂದ ಶಾಸಕ ಸುರೇಶ್ ಗೌಡ ಅವರ ಪುತ್ರಿಗೆ ಗ್ರಾಮಸ್ಥರು ಹಿಗ್ಗಾಮಗ್ಗಾ ಕ್ಲಾಸ್ ತೆಗೆದುಕೊಂಡ ಪ್ರಸಂಗ ಗ್ರಾಮಾಂತರ ಕ್ಷೇತ್ರದ ಸೋರಕುಂಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುರ್ಲೆಗುಂಟೆ ಗ್ರಾಮದಲ್ಲಿ ನಡೆದಿದೆ.

ಕ್ಷೇತ್ರದಲ್ಲಿ ನೀರಿನ ಸಮಸ್ಯೆಯಿದ್ದು ಇದನ್ನು ಬಗೆಹರಿಸದ ನಿಮ್ಮ ತಂದೆಯ ಪರ ಈಗ ಮತಯಾಚನೆಗೆ ಬಂದಿದ್ದೀರ. ಚುನಾವಣೆ ಬಂದಾಗ ಮಾತ್ರ ನಾವು ನೆನಪಾಗುತ್ತೇವೆ ಎಂದು ಶಾಸಕರ ಪುತ್ರಿ ಐಶ್ವರ್ಯ ಸುರೇಶ್ ಗೌಡಗೆ ಛೀಮಾರಿ ಹಾಕಿದರು.

ಗ್ರಾಮಸ್ಥರ ಮನವೊಲಿಸಲು ಐಶ್ವರ್ಯ ಸಾಕಷ್ಟು ಪ್ರಯೋಜನವಾಗಲಿಲ್ಲ. ಪಟ್ಟು ಬಿಡದ ಗ್ರಾಮಸ್ಥರು ಗ್ರಾಮದಲ್ಲಿ ಪ್ರಚಾರ ನಡೆಸಲು ಅವಕಾಶ ಕೊಡಲಿಲ್ಲ.
ಈ ದೃಶ್ಯವನ್ನು ವ್ಯಕ್ತಿಯೊಬ್ಬರು ಮೊಬೈಲ್‍ನಲ್ಲಿ ಚಿತ್ರೀಕರಿಸುತ್ತಿದ್ದಾಗ ಇದರಿಂದ ಮತ್ತಷ್ಟು ಕುಪಿತಗೊಂಡ ಐಶ್ವರ್ಯ ನನ್ನ ಅನುಮತಿ ಇಲ್ಲದೆ ಹೇಗೆ ಚಿತ್ರೀಕರಣ ಮಾಡುತ್ತಿದ್ದೀರ ಎಂದು ಮತ್ತಷ್ಟು ರಂಪಾಟ ಮಾಡಿದ್ದು , ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಮೂಲಭೂತ ಸೌಲಭ್ಯ ಕಲ್ಪಿಸದ ನಿಮ್ಮ ತಂದೆಗೆ ನಾವು ವೋಟ್ ಹಾಕಬೇಕೇ? ಮೂರು ತಿಂಗಳಿನಿಂದ ಕುಡಿಯಲು ನೀರಿಲ್ಲ. ಶಾಸಕರು ಸೇಡಿನ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಗ್ರಾಮಸ್ಥರ ಮನವೊಲಿಸಲು ಎಷ್ಟು ಪ್ರಯತ್ನ ನಡೆಸಿದರಾದರೂ ಪ್ರಯೋಜನವಾಗದೆ ಬಂದ ದಾರಿಗೆ ಸುಂಕವಿಲ್ಲದಂತೆ ಐಶ್ವರ್ಯ ಹೊರನಡೆದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ