ಅನುರಾಧ ನಕ್ಷತ್ರ, ವೃಶ್ಚಿಕ ರಾಶಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹುಟ್ಟಿದ್ದಾರೆ. ಇವರ ಜಾತಕದಲ್ಲಿ ಇದು ನಿಮಗೆ ಕೊನೆ ಚುನಾವಣೆ : ಟಿ.ಎ.ಶರವಣ

ತುಮಕೂರು, ಏ.11- ಅನುರಾಧ ನಕ್ಷತ್ರ, ವೃಶ್ಚಿಕ ರಾಶಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹುಟ್ಟಿದ್ದಾರೆ. ಇವರ ಜಾತಕದಲ್ಲಿ ಇದು ನಿಮಗೆ ಕೊನೆ ಚುನಾವಣೆ ಎಂದು ಮೇಲ್ಮನೆ ಸದಸ್ಯ ಟಿ.ಎ.ಶರವಣ ಭವಿಷ್ಯ ನುಡಿದಿದ್ದಾರೆ.

ಅವರ ರಾಶಿಯಲ್ಲಿ ಶನೇಶ್ವರನ ಪ್ರವೇಶವಾಗಿದೆ. ಇದು ಅವರಿಗೆ ಕೊನೆಯ ಆಟ. ಚಾಮುಂಡಿ ಕ್ಷೇತ್ರದಲ್ಲಿ ಅವರ ಸೋಲು ಖಚಿತ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಮುಖ್ಯಮಂತ್ರಿಗಳು ಸೋಲಿನ ಭೀತಿಯಲ್ಲಿ ಏನೇನೋ ಮಾತಾಡ್ತಾ ಇದ್ದಾರೆ. ನಿಮ್ಮನ್ನು ಸೋಲಿಸೋಕ್ಕೆ ಕಾಂಗ್ರೆಸ್‍ನ ಬಿ ಟೀಂ ಸಾಕು. ನೀವು ಬಾದಾಮಿ ಕ್ಷೇತ್ರಕ್ಕೂ ಹೋದರೂ ಜನ ನಿಮಗೆ ಮನ್ನಣೆ ನೀಡೋದಿಲ್ಲ. ಕುಮಾರಸ್ವಾಮಿ ಅವರು ಈ ಬಾರಿ ಮುಖ್ಯಮಂತ್ರಿ ಆಗೇ ಆಗ್ತಾರೆ. ಅವರ ಭವಿಷ್ಯ ಚೆನ್ನಾಗಿದೆ. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಈಗಾಗಲೇ ರಾಜ್ಯದ ಹಲವು ಭಾಗಗಳಲ್ಲಿ ಸಂಚರಿಸಿದ್ದು ಜೆಡಿಎಸ್ ಪರ ಮತದಾರರು ಒಳ್ಳೆಯ ಅಭಿಪ್ರಾಯ ಇಟ್ಟುಕೊಂಡಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬರುವುದು ಶತ ಸಿದ್ಧ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ