ಹಾಡಹಗಲೇ ಮೂರು ಸರ ಅಪಹರಣ

ಬೆಂಗಳೂರು, ಏ.11-ನಿನ್ನೆ ನಗರದಲ್ಲಿ ಹಾಡಹಗಲೇ ಮೂರು ಸರ ಅಪಹರಣ ಪ್ರಕರಣ ನಡೆದಿದೆ.
ಯಲಹಂಕ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಸರ ಅಪಹರಣ ಪ್ರಕರಣ ನಡೆದಿದೆ.
ಬಾಗಲೂರು ರಸ್ತೆಯಲ್ಲಿ ರುದ್ರಮ್ಮ ಎಂಬುವರು ನಿನ್ನೆ ಬೆಳಿಗ್ಗೆ 11.30ರಲ್ಲಿ ನಡೆದು ಹೋಗುತ್ತಿದ್ದಾಗ ಬೈಕ್‍ನಲ್ಲಿ ಬಂದ ಇಬ್ಬರು ಆಕೆಯ ಕೊರಳಿನಲ್ಲಿದ್ದ ಆರು ಗ್ರಾಂ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಸಪ್ತಗಿರಿ ಲೇಔಟ್ 5ನೇ ಕ್ರಾಸ್ ನಿವಾಸಿ ಪದ್ಮಮ್ಮ ಎಂಬುವರು ನಿನ್ನೆ ಮಧ್ಯಾಹ್ನ 12 ಗಂಟೆಯಲ್ಲಿ ನಡೆದು ಹೋಗುತ್ತಿದ್ದಾಗ, ಬೈಕ್‍ನಲ್ಲಿ ಬಂದ ಇಬ್ಬರು ಆಕೆಯ ಕುತ್ತಿಗೆಯಲ್ಲಿದ್ದ 40 ಗ್ರಾಂ ಸರವನ್ನು ದೋಚಿ ಪರಾರಿಯಾಗಿದ್ದಾರೆ.

ಈ ಎರಡೂ ಪ್ರಕರಣಗಳು ಯಲಹಂಕ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇನ್ನೊಂದು ಪ್ರಕರಣ ಚಿಕ್ಕಜಾಲ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಮಯ್ಯ ಲೇಔಟ್ ನಿವಾಸಿ ರುಕ್ಮಿಣಮ್ಮ ನಿನ್ನೆ ಮಧ್ಯಾಹ್ನ 12.15ರ ಸಮಯದಲ್ಲಿ ಹುಣಸಮಾರನಹಳ್ಳಿಯಲ್ಲಿ ನಡೆದು ಹೋಗುತ್ತಿದ್ದಾಗ ಬೈಕ್‍ನಲ್ಲಿ ಬಂದ ಇಬ್ಬರು ಸರಗಳ್ಳರು ಆಕೆಯ ಕತ್ತಿನಲ್ಲಿದ್ದ 25 ಗ್ರಾಂ ಚಿನ್ನದ ಸರವನ್ನು ದೋಚಿದ್ದಾರೆ.
ಈ ಸಂಬಂಧ ಚಿಕ್ಕಜಾಲ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ