ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಚಂಪಾರಣ್ ಸತ್ಯಾಗ್ರಹಕ್ಕೀಗ 100 ವರ್ಷ

ನವದೆಹಲಿ, ಏ.10-ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಒಂದು ಪ್ರಮುಖ ಘಟ್ಟವಾದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಚಂಪಾರಣ್ ಸತ್ಯಾಗ್ರಹಕ್ಕೀಗ 100 ವರ್ಷ.

ಈ ಸಂದರ್ಭದಲ್ಲಿ ಚಂಪಾರಣ್ ಸತ್ಯಾಗ್ರಹದ ಸ್ಥಳವಾದ ಬಿಹಾರ ಸೇರಿದಂತೆ ದೇಶದ ವಿವಿಧೆಡೆ ಅನೇಕ ಕಾರ್ಯಕ್ರಮಗಳು ಮತ್ತು ಗಾಂಧಿ ಸತ್ಯಾಗ್ರಹ ಚಳವಳಿ ಕುರಿತ ಪ್ರದರ್ಶನಗಳು ನಡೆಯುತ್ತಿವೆ.

100 ವರ್ಷಗಳ ಹಿಂದೆ ಭಾರತವನ್ನು ಬ್ರಿಟಿಷರ ದಬ್ಬಾಳಿಕೆಯ ಆಡಳಿತದಿಂದ ಸ್ವಚ್ಛಗೊಳಿಸಲು ಗಾಂಧೀಜಿ ಚಂಪಾರಣ್ ಸತ್ಯಾಗ್ರಹ ಚಳವಳಿ ಆರಂಭಿಸಿದ್ದರು. ಈಗ ನಾವು ಸ್ವಚ್ಛ ಭಾರತಕ್ಕಾಗಿ ಆಂದೋಲನ ನಡೆಸುತ್ತಿದ್ದೇವೆ ಎಂದು ಮೋದಿ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ