ಫಸಲು ನೀಡುತ್ತಿದ್ದ ಸುಮಾರು 300 ಅಡಿಕೆ ಮರಗಳನ್ನು ದುಷ್ಕರ್ಮಿಗಳು ಕಡಿದು ಹಾಕಿರುವ ಘಟನೆ

ದಾವಣಗೆರೆ, ಏ.9- ಫಸಲು ನೀಡುತ್ತಿದ್ದ ಸುಮಾರು 300 ಅಡಿಕೆ ಮರಗಳನ್ನು ದುಷ್ಕರ್ಮಿಗಳು ಕಡಿದು ಹಾಕಿರುವ ಘಟನೆ ಹುಣಸೆಕಟ್ಟೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶೇಖರಯ್ಯ ಎಂಬುವವರಿಗೆ ಸೇರಿದ ಅಡಿಕೆ ಮರಗಳನ್ನು ಕಳೆದ ರಾತ್ರಿ ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ. ಇಂದು ಬೆಳಗ್ಗೆ ಶೇಖರಯ್ಯ ತೋಟಕ್ಕೆ ಹೋದಾಗ ಅಡಿಕೆ ಮರಗಳು ಧರೆಗುರುಳಿದ್ದನ್ನು ಕಂಡು ಅವರು ಸಹ ದಿಕ್ಕು ತೋಚದೆ ಕುಸಿದು ಬಿದ್ದಿದ್ದಾರೆ.

ಯಾವ ಕಾರಣಕ್ಕಾಗಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂಬುದು ತಿಳಿದುಬಂದಿಲ್ಲ. ಜೀವನಕ್ಕೆ ಆಧಾರವಾಗಿದ್ದ ತೋಟವನ್ನು ದುಷ್ಕರ್ಮಿಗಳು ಹಾಳು ಮಾಡಿದ್ದು, ಶೇಖರಯ್ಯ ಹಾಗೂ ಕುಟುಂಬ ತೀವ್ರ ಕಂಗಾಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ