ದುಷ್ಕರ್ಮಿಗಳ ಕಲ್ಲು ತೂರಾಟದ ವೇಳೆ ಸಿಆರ್‍ಪಿಎಫ್ ವಾಹನ ಡಿಕ್ಕಿಯಾಗಿ ಇಬ್ಬರು ಯೋಧರು ಮೃತ:

ಶ್ರೀನಗರ, ಏ.5-ದುಷ್ಕರ್ಮಿಗಳ ಕಲ್ಲು ತೂರಾಟದ ವೇಳೆ ಸಿಆರ್‍ಪಿಎಫ್ ವಾಹನ ಡಿಕ್ಕಿಯಾಗಿ ಇಬ್ಬರು ಯೋಧರು ಮೃತಪಟ್ಟ ಘಟನೆ ದಕ್ಷಿಣ ಕಾಶ್ಮೀರದ ಕೊಕೆರ್‍ನಾಗ್‍ನಲ್ಲಿ ನಿನ್ನೆ ಸಂಜೆ ಸಂಭವಿಸಿದೆ. ಕಿಡಿಗೇಡಿಗಳ ಗುಂಪೆÇಂದು ಕಲ್ಲು ತೂರಾಟದಲ್ಲಿ ತೊಡಗಿತ್ತು. ಈ ಸಂದರ್ಭದಲ್ಲಿ ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ಯೋಧರು ಸಾಗುತ್ತಿದ್ದ ಬೈಕ್‍ಗೆ ವಾಹನ ಡಿಕ್ಕಿಯಾಯಿತು. ಈ ದುರಂತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರು. ಇವರನ್ನು ರಿಯಾಜ್ ಅಹ್ಮದ್ ವಾನಿ ಮತ್ತು ನಿಸ್ಸಾರ್ ಅಹ್ಮದ್ ವಾನಿ ಎಂದು ಗುರುತಿಸಲಾಗಿದೆ. ಸಿಆರ್‍ಪಿಎಫ್ ವಾಹನದ ಚಾಲಕನ ತಲೆಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಶೋಚನೀಯವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ