ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಬೆಂಗಳೂರು, ಏ.3-ಅಂಬೇಡ್ಕರ್ ಬರೆದ ಸಂವಿಧಾನದ ಆಶಯಗಳನ್ನು ರಾಜ್ಯದಲ್ಲಿ ಕಾರ್ಯರೂಪಕ್ಕೆ ತರಲು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಚುನಾವಣಾ ಅಭ್ಯರ್ಥಿಗಳ ಮೊದಲ ಸುತ್ತಿನ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.

ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಕೃಷ್ಣಗುಣಸಾಗರ ಮಾತನಾಡಿ, ಭಾರತದ ಎರಡು ಸಂವಿಧಾನಗಳು ಚಾಲ್ತಿಯಲ್ಲಿದೆ. ಅಂಬೇಡ್ಕರ್ ರಚಿಸಿದ ರಾಜಕೀಯ ಸಂವಿಧಾನ ಇನ್ನೊಂದು ಜಡ ಸಂಪ್ರದಾಯಗಳ ಸಾಮಾಜಿಕ ಸಂವಿಧಾನವಾಗಿದೆ. ರಾಜ್ಯ ರಾಜಕೀಯ ಸಂವಿಧಾನವು ಸಾಮಾಜಿಕ ಸಂವಿಧಾನದ ಅವಮಾನೀಯ ನೆಲೆಗಳ ನಾಶಕ್ಕೆ ರಾಜಕೀಯ ಸುದ್ದಿಯನ್ನು ಕೊಟ್ಟಿದೆ. ಇದರ ಫಲವಾಗಿ ಕಾನೂನು ಕಾಯ್ದೆಗಳು ರಚನೆಯಾಗಿವೆ. ಈ ಸಕ್ರಿಯೆಯೇ ಮುಂದುವರೆದಿದೆ. ಆದರೆ ಸಾಮಾಜಿಕ ಸಂವಿಧಾನದ ಶಿರತ್ವ ಅಷ್ಟು ಸುಲಭವಾದುದಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ