ಹಲವು ವರ್ಷಗಳಿಂದ ಪ್ರೀತಿಸಿ ಇದೀಗ ಮದುವೆಯಾಗಲು ನಿರಾಕರಾ

ಬೆಂಗಳೂರು, ಏ.3- ಹಲವು ವರ್ಷಗಳಿಂದ ಪ್ರೀತಿಸಿ ಇದೀಗ ಮದುವೆಯಾಗಲು ನಿರಾಕರಿಸಿ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆಂದು ಆರೋಪಿಸಿ ಮುಂಬೈ ಮೂಲದ ನಟಿಯೊಬ್ಬರು ಸ್ಯಾಂಡಲ್ ವುಡ್ ನಟನ ವಿರುದ್ಧ ರಾಜರಾಜೇಶ್ವರಿನಗರ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನನ್ವಯ ಸ್ಯಾಂಡಲ್‍ವುಡ್ ನಟ ಕಿರಣ್ ರಾಜ್‍ನನ್ನು ಪೆÇಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.
ಮುಂಬೈ ಮೂಲದ ಮಾಡಲ್ ಹಾಗೂ ನಟಿಯೊಬ್ಬರನ್ನು ಸ್ಯಾಂಡಲ್ ವುಡ್ ನಟ ಕಿರಣ್‍ರಾಜ್ ಪ್ರೀತಿಸುತ್ತಿದ್ದು , ಇವರಿಬ್ಬರೂ ಕಳೆದ ಐದು ವರ್ಷದಿಂದ ರಾಜರಾಜೇಶ್ವರನಗರ ವ್ಯಾಪ್ತಿಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.

ಮದುವೆಯಾಗೋಣವೆಂದು ಕಿರಣ್‍ರಾಜ್ ಜೊತೆ ಮಾತುಕತೆ ನಡೆಸಿದಾಗ ಮದುವೆಗೆ ನಿರಾಕರಿಸಿ ಜಗಳವಾಡಿದ್ದು , ಮಾರ್ಚ್ 24ರಂದು ಇದೇ ವಿಚಾರವಾಗಿ ಗಲಾಟೆಯಾದಾಗ ನನ್ನ ಮೇಲೆ ಕಿರಣ್ ಹಲ್ಲೆ ನಡೆಸಿರುವುದಲ್ಲದೆ ತನಗೆ ವಂಚಿಸಿದ್ದಾರೆಂದು ರಾಜರಾಜೇಶ್ವರಿನಗರ ಠಾಣೆಗೆ ನಟಿ ದೂರು ನೀಡಿದ್ದಾರೆ.

ವಂಚನೆ, ಹಲ್ಲೆ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ನಟ ಕಿರಣ್‍ರಾಜ್‍ನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ