ನೋಡಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್ ಆದೇಶ

ಬೆಂಗಳೂರು, ಮಾ.30- ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ 28 ನೋಡಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್ ಆದೇಶ ಹೊರಡಿಸಿದ್ದಾರೆ.

ಆಯಾ ವಿಧಾನಸಭಾ ಕ್ಷೇತ್ರಗಳಿಗೆ ನೇಮಕಗೊಂಡ ನೋಡಲ್ ಅಧಿಕಾರಿಗಳು ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಆದೇಶಿಸಲಾಗಿದೆ. ಚುನಾವಣಾ ದಿನಾಂಕ ಘೋಷಣೆಯಾದ ದಿನದಿಂದ ಚುನಾವಣೆ ಮುಗಿಯುವವರೆಗೂ ನೋಡಲ್ ಅಧಿಕಾರಿಗಳು ತೆಗೆದುಕೊಂಡ ಕ್ರಮದ ಬಗ್ಗೆ ಹಾಗೂ ದೈನಂದಿನ ವರದಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಹಾಗೂ ಜಿಲ್ಲಾ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಅವರುಗಳಿಗೆ ವರದಿ ನೀಡಬೇಕು.

ವರದಿ ನೀಡಲು ವಿಫಲರಾಗುವ ಅಧಿಕಾರಿಗಳ ವಿರುದ್ಧ ಚುನಾವಣಾ ಕಾಯ್ದೆ ಅನ್ವಯ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ನೋಡಲ್ ಅಧಿಕಾರಿಗಳ ವಿವರ:
ಯಲಹಂಕ-ವಾಸು, ಕೆ.ಆರ್.ಪುರಂ-ಪರಮೇಶ್ವರಗೌಡ, ಬ್ಯಾಟರಾಯನಪುರ- ಮೋಹನ್‍ದಾಸ್, ಯಶವಂತಪುರ-ಜಯಪ್ರಕಾಶ್, ರಾಜರಾಜೇಶ್ವರಿ ನಗರ- ಶ್ರೀನಿವಾಸ್.ಎಂ., ದಾಸರಹಳ್ಳಿ -ಶೇಷಾದ್ರಿ.ವೈ.ಎನ್, ಮಹಾಲಕ್ಷ್ಮಿ ಲೇ ಔಟ್- ಎಲ್.ತಿಮ್ಮರಸ್, ಮಲ್ಲೇಶ್ವರಂ-ಗೋವಿಂದರಾಜು, ಹೆಬ್ಬಾಳ-ಮೋಹನ್.ಸಿ.ಹೊಂಡದೇರಿ, ಪುಲಕೇಶಿನಗರ-ಮಾರಡಿ ರಂಗಪ್ಪ, ಸರ್ವಜ್ಞನಗರ- ಎಸ್.ಜಗದೀಶ್, ಸಿ.ವಿ.ರಾಮನ್‍ನಗರ-ರಾಜು, ಶಿವಾಜಿನಗರ-ಎಚ್.ಎನ್.ಜಯಸಿಂಹ, ಶಾಂತಿನಗರ-ನಾಗರಾಜ್, ಗಾಂಧಿನಗರ-ಪಾಲಾಕ್ಷಯ್ಯ, ರಾಜಾಜಿನಗರ- ಶಶಿಕುಮಾರ್, ಗೋವಿಂದರಾಜ ನಗರ-ಶಿವಾನಂದ.ಬಿ.ಎ, ವಿಜಯನಗರ-ಭೀಮೇಶ್, ಚಾಮರಾಜಪೇಟೆ-ತನ್ವೀರ್ ಅಹಮದ್, ಚಿಕ್ಕಪೇಟೆ-ಮಂಜುನಾಥ ರೆಡ್ಡಿ, ಬಸವನಗುಡಿ-ಎಂ.ಮಹದೇವ್ , ಪದ್ಮನಾಭನಗರ-ವಿಜಯ್‍ಕುಮಾರ್ ಹರಿದಾಸ್, ಬಿಟಿಎಂ ಲೇ ಔಟ್-ವೀರಸಿಂಗ್ ನಾಯಕ್, ಜಯನಗರ-ರಾಹುಲ್.ಎಸ್.ಬಿ, ಮಹದೇವಪುರ-ಪಾಪರೆಡ್ಡಿ, ಬೊಮ್ಮನ ಹಳ್ಳಿ -ಎಂ.ಕೆ.ವೆಂಕಟೇಶ್, ಬೆಂಗಳೂರು ದಕ್ಷಿಣ-ಬಸವರಾಜು, ಆನೇಕಲ್-ಲಕ್ಷ್ಮೀಸಾಗರ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ