ಮೊಬೈಲ್ ಕಸಿದು ಪರಾರಿ:

ಬೆಂಗಳೂರು, ಮಾ.29-ವ್ಯಕ್ತಿಯೊಬ್ಬರು ಅಪಾರ್ಟ್‍ಮೆಂಟ್ ಗೇಟ್ ಬಳಿ ಮೊಬೈಲ್‍ನಲ್ಲಿ ಮಾತನಾಡುತ್ತಾ ನಿಂತಿದ್ದಾಗ, ದರೋಡೆಕೋರನೊಬ್ಬ ಅವರ ಕೈಯಿಂದ ಭಾರೀ ಬೆಲೆಯ ಮೊಬೈಲ್ ಕಸಿದು ಪರಾರಿಯಾಗಿರುವ ಘಟನೆ ಸಿದ್ದಾಪುರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬ್ರಿಜೇಶ್ ಸಂಪತ್ ಎಂಬುವರ ಮೊಬೈಲ್‍ನ್ನು ಕಸಿಯಲಾಗಿದೆ.
ಇವರು ಜಯನಗರ 2ನೇ ಬ್ಲಾಕ್ ಮಾಧವನಗರದಲ್ಲಿರುವ ಅಪಾರ್ಟ್‍ಮೆಂಟ್‍ನ ಗೇಟ್ ಬಳಿ ರಾತ್ರಿ 9.15ರ ಸಮಯದಲ್ಲಿ ಮೊಬೈಲ್‍ನಲ್ಲಿ ಮಾತನಾಡುತ್ತಾ ನಿಂತಿದ್ದರು.
ಈ ಸಂದರ್ಭದಲ್ಲಿ ದರೋಡೆಕೋರ ಇವರ ಭಾರೀ ಬೆಲೆಯ ಮೊಬೈಲ್ ಕಸಿದು ಪರಾರಿಯಾಗಿದ್ದಾನೆ.
ಸಿದ್ದಾಪುರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ