ಛತ್ತೀಸ್‍ಗಢದಲ್ಲಿ ನಕ್ಸಲೀಯರ ಅಟ್ಟಹಾಸ ಮುಂದುವರೆದಿದೆ:

ರಾಯ್‍ಪುರ್, ಮಾ.28-ಛತ್ತೀಸ್‍ಗಢದಲ್ಲಿ ನಕ್ಸಲೀಯರ ಅಟ್ಟಹಾಸ ಮುಂದುವರಿದಿದ್ದು, ಬಿಜಾಪುರ ಜಿಲ್ಲೆಯ ಬಸ್ತಾರ್‍ನಲ್ಲಿ ಮಾವೋವಾದಿಗಳು ಬಿಜೆಪಿ ಮುಖಂಡರೊಬ್ಬರನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಜಗದೀಶ್ ಕೊಂದ್ರಾ ಕೊಲೆಯಾದ ಬಿಜೆಪಿಯ ಯುವ ನಾಯಕ. ಅವರ ನಿವಾಸಕ್ಕೆ ನುಗ್ಗಿದ ನಾಲ್ವರು ನಕ್ಸಲರು ಹರಿತವಾದ ಆಯುಧಗಳಿಂದ ಅವರನ್ನು ಕೊಚ್ಚಿ ಹಾಕಿದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಜಗದೀಶ್ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಕೊನೆಯುಸಿರೆಳೆದರು.
ಪೆÇಲೀಸ್ ಠಾಣೆಯಿಂದ ಕೇವಲ 100 ಮೀಟರ್ ದೂರದಲ್ಲಿ ಈ ಭೀಕರ ಹತ್ಯೆ ನಡೆದಿದೆ. ಇದು ಮಾವೋವಾದಿಗಳ ದುಷ್ಕøತ್ಯ ಎಂದು ಬಿಜಾಪುರದ ಹೆಚ್ಚುವರಿ
ಪೆÇಲೀಸ್ ಅಧೀಕ್ಷಕ ದಿವ್ಯಾಂಗ್ ಪಟೇಲ್ ಹೇಳಿದ್ದಾರೆ. ಹಂತಕರ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ನಕ್ಸಲರ ಬೇಟೆಗೆ ಕಾರ್ಯಾಚರಣೆ ಮುಂದುವರಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ