ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭೀಮಾತೀರದ ರೌಡಿ ಶೀಟರ್‍ಗಳ ಮನೆ ತಪಾಸಣೆ :

ವಿಜಯಪುರ, ಮಾ.26- ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭೀಮಾತೀರದ ರೌಡಿ ಶೀಟರ್‍ಗಳ ಮನೆಗೆ ಭೇಟಿ ನೀಡಿ ಶಸ್ತ್ರಾಸ್ತ್ರಗಳ ಸಂಗ್ರಹಣೆ ಕುರಿತು ತಪಾಸಣೆ ನಡೆಸಿದರು.
ಚಡಚಣ, ಇಂಡಿ, ಝಳಕಿ, ಆಲಮೇಲ, ಸಿಂಧಗಿ, ಓರ್ತಿ ಠಾಣಾ ವ್ಯಾಪ್ತಿಯ ರೌಡಿ ಶೀಟರ್‍ಗಳು ನಾಳೆ ಪರೇಡ್ ನಡೆಯಲಿರುವ ಹಿನ್ನೆಲೆಯಲ್ಲಿ ಇಂದು ತಪಾಸಣೆ ನಡೆಸಿ ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು.
ನಾಳೆ ವಿಜಯಪುರದಲ್ಲಿ ಈ ರೌಡಿಗಳಿಗೆ ಪರೇಡ್ ನಡೆಸಲಾಗುವುದು. ಚುನಾವಣೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ಪರೇಡ್ ನಡೆಸಲಾಗುತ್ತಿದೆ ಎಂದು ಐಜಿಪಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ