ಸಾಫ್ಟ್‍ವೇರ್ ಕಂಪೆನಿ ನೌಕರರನ್ನು ಅಡ್ಡಗಟ್ಟಿ ದರೋಡೆ:

ಬೆಂಗಳೂರು, ಮಾ.26-ಇಂದು ಬೆಳಗಿನ ಜಾವ ಕೆಲಸಕ್ಕೆ ತೆರಳುತ್ತಿದ್ದ ಇಬ್ಬರು ಸಾಫ್ಟ್‍ವೇರ್ ಕಂಪೆನಿ ನೌಕರರನ್ನು ಅಡ್ಡಗಟ್ಟಿದ ನಾಲ್ವರು ದರೋಡೆಕೋರರು ಚಾಕು ತೋರಿಸಿ ಬೆದರಿಸಿ ಸರ, ಮೊಬೈಲ್ ಹಾಗೂ ಹಣವನ್ನು ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಹೈಗ್ರೌಂಡ್ಸ್ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಿಂಗ್‍ಹ್ಯಾಮ್ ರಸ್ತೆಯ ಕಲ್ಪನಾ ಸರ್ಕಲ್ ಬಳಿ ಸಾಫ್ಟ್‍ವೇರ್ ಕಂಪೆನಿಯ ನೌಕರರಾದ ಪ್ರಶಾಂತ್ ತನ್ನ ಸ್ನೇಹಿತನಾದ ಪ್ರವೀಣ್ ಶರ್ಮಾ ಜೊತೆ ಇಂದು ಬೆಳಗಿನ ಜಾವ 5.30ರಲ್ಲಿ ನಡೆದುಕೊಂಡು ಕೆಲಸಕ್ಕೆ ತೆರಳುತ್ತಿದ್ದರು.

ಈ ಸಂದರ್ಭದಲ್ಲಿ ಎರಡು ಬೈಕ್‍ಗಳಲ್ಲಿ ಬಂದ ನಾಲ್ವರು ದರೋಡೆಕೋರರು ಇವರನ್ನು ಅಡ್ಡಗಟ್ಟಿ ಚಾಕು ತೋರಿಸಿ ಬೆದರಿಸಿ ಪ್ರಶಾಂತ್ ಬಳಿ ಇದ್ದ 6 ಸಾವಿರ ಹಣ, ಮೊಬೈಲ್ ಹಾಗೂ ಸರ, ಪ್ರವೀಣ್ ಶರ್ಮಾ ಬಳಿಯಿದ್ದ 15 ಸಾವಿರ ಹಣ, ಸರ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ.

ಈ ಸಂಬಂಧ ಪ್ರಶಾಂತ್ ಅವರು ಹೈಗ್ರೌಂಡ್ಸ್ ಪೆÇಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ದರೋಡೆಕೋರರಿಗಾಗಿ ಶೋಧ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ