ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್

ಅಮೃತಸರ;ಮಾ-25: ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರು ಇಂದು ಅಮೃತಸರದಲ್ಲಿರುವ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ್ದಾರೆ.

ಪತ್ನಿ ಗುರ್ಶಾರಾನ್ ಕೌರ್ ಅವರೊಂದಿಗೆ ಮನಮೋಹನ್ ಸಿಂಗ್ ಅವರು ಬೆಳಿಗ್ಗೆ 6 ಗಂಟೆಗೆ ದರ್ಬಾಸರ್ ಸಾಹಿಬ್’ಗೆ ಭೇಟಿ ನೀಡಿದ್ದಾರೆ. ಸಿಂಗ್ ಅವರ ಆಗಮನ ಹಿನ್ನಲೆಯಲ್ಲಿ ಎಲ್ಲಾ ಭಕ್ತಾದಿಗಳಿಗೂ ದರ್ಬಾರ್ ಸಾಹಿಬ್’ನ ಎಲ್ಲಾ ದ್ವಾರಗಳನ್ನು ತೆರಯಲಾಗಿತ್ತು.

ಮನಮೋಹನ್ ಸಿಂಗ್ ಹಾಗೂ ಅವರ ಪತ್ನಿ ಭೇಟಿ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದ ಪಂಜಾಬ್ ಸರ್ಕಾರ, ಸಿಂಗ್ ಹಾಗೂ ಅವರ ಪತ್ನಿಗೆ ವಿಶೇಷ ರಕ್ಷಣಾ ದಳ ಹಾಗೂ ಪಂಜಾಬ್ ಪೊಲೀಸರ ರಕ್ಷಣೆಯನ್ನು ನೀಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ