![temple chariot](http://kannada.vartamitra.com/wp-content/uploads/2018/03/temple-chariot-296x381.jpg)
ಕಲಬುರ್ಗಿ, ಮಾ.19- ರಥೋತ್ಸವದ ವೇಳೆ ವ್ಯಕ್ತಿಯೊಬ್ಬ ರಥದ ಚಕ್ರಕ್ಕೆ ಸಿಲುಕಿ ಮೃತಪಟ್ಟ ದಾರುಣ ಘಟನೆ ಕಲಬುರ್ಗಿ ಜಿಲ್ಲೆಯಲ್ಲಿ ಸಂಭವಿಸಿದೆ.
ಜಿಲ್ಲೆಯ ಪ್ರಸಿದ್ಧ ಶಿವಲಿಂಗೇಶ್ವರ ರಥೋತ್ಸವದ ವೇಳೆ ಈ ದುರ್ಘಟನೆ ನಡೆದಿದ್ದು, 48 ವರ್ಷದ ವ್ಯಕ್ತಿ ಅಸುನೀಗಿದ್ದಾನೆ.
ರಥ ಮೆರವಣಿಗೆ ವೇಳೆ ಆಕಸ್ಮಿಕವಾಗಿ ವ್ಯಕ್ತಿ ಕೆಳಗೆ ಇದ್ದಾಗ ಆತನ ಮೇಲೆ ಚಕ್ರ ಹರಿದು ಈ ದುರಂತ ಸಂಭವಿಸಿದೆ.