ಪಂಚಿಂಗ್ ಮಿಷಿನ್‍ಗೆ ಕಾರ್ಮಿಕನೊಬ್ಬ ಸಿಲುಕಿ ಸಾವು

ಮೈಸೂರು,ಮಾ.13- ಪಂಚಿಂಗ್ ಮಿಷಿನ್‍ಗೆ ಕಾರ್ಮಿಕನೊಬ್ಬ ಸಿಲುಕಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ
ನಡೆದಿದೆ. ಕುಂಬಾರ ಕೊಪ್ಪಲಿನ ಸುಭಾಷ್‍ನಗರದ ವಾಸಿ ಸುಬ್ರಮಣಿ(19) ಸಾವನ್ನಪ್ಪಿದ ಯುವಕ. ಹೆಬ್ಬಾಳ ಇಂಡಸ್ಟ್ರೀಯಲ್ ಬಡಾವಣೆಯಲ್ಲಿನ ನಿಧಿ ಇಂಡಸ್ಟ್ರೀಸ್‍ನಲ್ಲಿ ಈ ಘಟನೆ ನಡೆದಿದೆ. ಕಾರ್ಡ್‍ಬೋಡ್ ್ ತಯಾರಿಸುವ ಕೈಗಾರಿಕೆಯಾಗಿರುವ ನಿಧಿ ಇಂಡಸ್ಟೀಸ್‍ನಲ್ಲಿ ಸುಬ್ರಮಣಿ ಪಂಚಿಂಗ್ ಮಿಷಿನ್ ಆಪರೇಟರ್ ಆಗಿ ಕಾರ್ಯ ನಿರ್ವಹಿಸತ್ತಿದ್ದರು. ಯಂತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಆಕಸ್ಮಿಕವಾಗಿ ಯಂತ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಹೆಬ್ಬಾಳು ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ