ಮುಂಜಾನೆಯೇ ತಾಯಿ ಚಿರತೆ ಹಾಗೂ ಎರಡು ಮರಿಗಳು ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ

ಬಂಗಾರಪೇಟೆ, ಮಾ.8- ಇಂದು ಮುಂಜಾನೆಯೇ ತಾಯಿ ಚಿರತೆ ಹಾಗೂ ಎರಡು ಮರಿಗಳು ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಆತಂಕವುಂಟು ಮಾಡಿದೆ.
ಮಾಲೂರು ತಾಲ್ಲೂಕಿನ ಮಾರಲಹಳ್ಳಿ ಗ್ರಾಮದಲ್ಲಿ ರಾತ್ರಿ ಕುರಿಯೊಂದನ್ನು ಎಳೆದೊಯ್ದ ಚಿರತೆ ಹಾಗೂ ಮರಿಗಳು ತಿಂದು ಪರಾರಿಯಾಗಿವೆ.
ಮೂರು ದಿನಗಳ ಚಿರತೆ ಕಾಣಿಸಿಕೊಂಡಿದ್ದು, ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಭೇಟಿ ನೀಡಿದ ಇಲಾಖೆ ಅಧಿಕಾರಿಗಳು ಚಿರತೆಯನ್ನು ಹಿಡಿಯಲು ಬೋನ್ ಇರಿಸಿದ್ದಾರೆ. ಆದರೆ ಬೋನಿಗೆ ಬೀಳದೆ ಚಿರತೆಗಳು ಗ್ರಾಮದಲ್ಲಿ ಆಗಾಗ ಕಾಣಿಸಿಕೊಂಡು, ಕುರಿ, ಮೇಕೆಗಳನ್ನು ಎಳೆದೊಯುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ