ಶಾಂತಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಲಕ್ಷ್ಮಿನಾರಾಯಣ್ಗೆ ಸ್ಥಳೀಯ ಸಂಸ್ಥೆಗಳಿಂದ ಬೆಂಬಲ

ಬೆಂಗಳೂರು, ಮಾ.5-ಮುಂದಿನ ಚುನಾವಣೆಗೆ ಶಾಂತಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ದೊಮ್ಮಲೂರು ವಾರ್ಡ್ ಬಿಬಿಎಂಪಿ ಸದಸ್ಯ ಲಕ್ಷ್ಮಿನಾರಾಯಣ್ (ಗುಂಡಣ್ಣ) ಅವರಿಗೆ ಸ್ಥಳೀಯ ಸಂಘ ಸಂಸ್ಥೆಗಳಿಂದ ಬೆಂಬಲ ವ್ಯಕ್ತವಾಗಿದೆ.

ಬಿಬಿಎಂಪಿ ಸದಸ್ಯರು ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲಕ್ಷ್ಮಿನಾರಾಯಣ್ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಸೇವೆಯಿಂದಲೂ ಜನಮನವನ್ನು ಸೆಳೆದಿದ್ದಾರೆ.

ದೊಮ್ಮಲೂರು ವಾರ್ಡ್‍ನ ಅಭಿವೃದ್ಧಿಗೆ ಹಲವಾರು ಪ್ರಗತಿ ಪರ ಚಿಂತನೆಗಳೊಂದಿಗೆ ಬೆಂಗಳೂರಿಗೆ ಮಾದರಿ ವಾರ್ಡನ್ನಾಗಿ ರೂಪಿಸಿರುವ ಹೆಗ್ಗಳಿಕೆಗೂ ಪಾತ್ರರಾಗಿರುವ ಇವರು, ವಾರ್ಡ್‍ನಲ್ಲಿ ಕೆಳಸೇತುವೆ ಆಟದ ಮೈದಾನ ಸುಸಜ್ಜಿತವಾಗಿ ನಿರ್ಮಾಣವಾಗಿರುವುದಲ್ಲದೆ, ಗುಂಡಣ್ಣ ಫೌಂಡೇಶನ್ ಮುಖಾಂತರ ನಿರಂತರ ಚಟುವಟಿಕೆಯಲ್ಲಿ ತೊಡಗಿ ಪರಿಸರ ಜಾಗೃತಿ ಕಾರ್ಯಕ್ರಮಗಳು, ಸ್ಲಂನಲ್ಲಿ ಆರೋಗ್ಯ ತಪಾಸಣಾ ಶಿಬಿರ, ಶುದ್ಧ ಕುಡಿಯುವ ನೀರಿನ ಘಟಕಗಳಂತಹ ಕ್ರಮಗಳಿಂದಾಗಿ ಜನಬೆಂಬಲಕ್ಕೆ ಕಾರಣರಾಗಿದ್ದಾರೆ. ಈ ದಿಸೆಯಲ್ಲಿ ಸ್ಥಳೀಯ ವಾರ್ಡ್ ನಾಗರಿಕರು ಅವರೆಡೆ ಒಲವು ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆಲವೊಂದು ಕಾರಣಗಳಿಂದಾಗಿ ಶಾಂತಿ ನಗರ ವಿಶೇಷವಾಗಿ ಗಮನ ಸೆಳೆದಿದೆ.
ನಲಪಾಡ್ ಮತ್ತು ವಿಧ್ವತ್ ಪ್ರಕರಣದಿಂದ ಶಾಂತಿನಗರ ಶಾಸಕ ಎನ್.ಎ.ಹ್ಯಾರೀಸ್ ಅವರ ರಾಜಕೀಯ ಭವಿಷ್ಯಕ್ಕೆ ಕುತ್ತು ಬಂದಿರುವ ನಡುವೆ ಕಾಂಗ್ರೆಸ್ ಇತರೆ ನಾಯಕರ ದೃಷ್ಟಿ ಈ ಕ್ಷೇತ್ರದತ್ತ ಹರಿಯುವಂತೆ ಮಾಡಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಬಿಬಿಎಂಪಿ ಸದಸ್ಯ ಲಕ್ಷ್ಮಿನಾರಾಯಣ್ ಹೆಸರು ಕೇಳಿ ಬರುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ