ಬೆಂಗಳೂರು,ಮಾ.3- ನಿಂತಿದ್ದ ಟ್ಯಾಂಕರ್ ಹಿಮ್ಮುಖವಾಗಿ ಚಲಿಸಿ ಚಾಲಕನಿಗೆ ಡಿಕ್ಕಿ ಹೊಡೆದು ಆತನ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಗರಕನಹಳ್ಳಿಯ ಸಿದ್ದಪ್ಪ(48) ಮೃತಪಟ್ಟ ವಾಟರ್ ಟ್ಯಾಂಕರ್ ಚಾಲಕ.
ನೀರು ತುಂಬಿಸಿಕೊಂಡು ಹೋಗಲು ಈತ ಮದ್ದೂರು ತಾಲ್ಲೂಕಿನ ಆಲೂರು ಕೆರೆಗೆ ಬಂದಿದ್ದ ಸಿದ್ದಪ್ಪ ನಿನ್ನೆ ವಾಹನ ನಿಲ್ಲಿಸಿ ಹಿಂದಕ್ಕೆ ಬರುತ್ತಿದ್ದಾಗ ಟ್ಯಾಂಕರ್ ಹಿಮ್ಮುಖವಾಗಿ ಚಲಿಸಿ ಈತನಿಗೆ ಡಿಕ್ಕಿ ಹೊಡೆದು ಹರಿದಿ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.