ಬಿಜೆಪಿ ಸರ್ಕಾರ ಬಂದರೆ ಮಹಾದಾಯಿ ಇತ್ಯರ್ಥ: ಬಿಎಸ್ ವೈ ಭರವಸೆ

ಬೀದರ್ : ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಾದಾಯಿ ಜಲ ವಿವಾದ ಇತ್ಯರ್ಥ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಬಿ.ಎಸ್ ಯಡಿಯೂರಪ್ಪ ಅವರ 75ನೇ ಜನ್ಮದಿನವನ್ನು ಬೀದರನಲ್ಲಿ ಬಿಜೆಪಿ ಮುಖಂಡರು ಅದ್ದೂರಿ ಯಿಂದ ಕೆಕ್ ಕಟ್ ಮಾಡುವ ಮೂಲಕ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಸ್ ವೈ, ರಾಹುಲ್ ಗಾಂಧಿ ರೈತರಿಗೆ ಕಣ್ಣು ತಪ್ಪಿಸಿ ಓಡಿಹೋಗಿದ್ದಾರೆ ಎಂದು ಆರೋಪಿಸಿದರು.

ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತೆ ಮಹಾದಾಯಿ ವಿವಾದ ಕ್ಕೆ ಸಂಪೂರ್ಣ ಅಂತ್ಯಹಾಡಲಾಗುವುದು. ಮಹಾದಾಯಿ ವಿವಾದಕ್ಕೆ ಅಂತ್ಯ ಹಾಡುವಗೋಸ್ಕರ ನಾನು ಸತತ ಪ್ರಯತ್ನ ಮಾಡುತ್ತಿದೆನೆ ಮುಂದೆ ಆ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಶಾಸಕ ಪ್ರಭು ಚಾವಣ, ಪ್ರಕಾಶ ಖಂಡ್ರೆ, ಸೂರ್ಯಕಾಂತ ನಾಗಮಾರಪಳ್ಳಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು

ರಾಹುಲ್ ಉತ್ತರ ಕರ್ನಾಟಕ ಪ್ರವಾಸದ ಬಗ್ಗೆ ನಾನು ಏನೂ ಹೇಳಲಾರೆ. 75 ವರ್ಷಗಳು ಕಳೆದರೂ ಉತ್ಸವ ಮಾತ್ರ ನನ್ನಲ್ಲಿ ಹೆಚ್ಚಾಗಿದೆ. ನನ್ನ 65 ನೇ ಜನ್ಮದಿಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆಗಮಿಸಿದ್ದರು. ಇಂದು 75 ನೇ ಜನ್ಮದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಬರುತ್ತಿರುವದು ನನ್ನ ಸೌಭಾಗ್ಯ ಎಂದು ಬಿಎಸ್ ವೈ ಹೇಳಿದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ