ಶಾಲಾ ಮಕ್ಕಳ ಮೇಲೆ ಹರಿದ ವಾಹನ: 9 ಮಕ್ಕಳು ಸಾವು; ಬಿಜೆಪಿ ನಾಯಕನ ವಿರುದ್ಧ ಎಫ್ ಐ ಆರ್ ದಾಖಲು

ಪಾಟ್ನಾ:ಫೆ-26: ಬಿಹಾರದ ಬಿಜೆಪಿ ನಾಯಕ ಮನೋಜ್ ಬೈತಾ ಚಲಾಯಿಸುತ್ತಿದ್ದ ಬೊಲೆರೋ ವಾಹನ ಶಾಲಾ ಮಕ್ಕಳ ಮೇಲೆ ಹರಿದ ಪರಿಣಾಮ 9 ಶಾಮಕ್ಕಳು ಸಾವನ್ನಪ್ಪಿರುವ ಘಟನೆ ಮುಜಾಫರ್ ಪುರ್ ನಲ್ಲಿ ನಡೆದಿದೆ. ಈ ಘಟನೆ ಸಂಬಂಧ್ ಬಿಜೆಪಿ ನಾಯಕ ಬೈತಾ ವಿರುದ್ಧ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.

ಬಿಹಾರದ ಮುಜಾಫರ್ ಪುರ್ ದ ಧರಮಂಪುರ್ ಗ್ರಾಮದ ನಿವಾಸಿ ಮೋಹ್ ಅನ್ಸಾರಿ ಅವರ ನೀಡಿದ ದೂರಿನ ಆಧಾರ ಮೇಲೆ ನಾಪತ್ತೆಯಾಗಿರುವ ಮನೋಜ್ ಬೈತಾ ಅವರ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದೇವೆ ಎಂದು ಮೀನಾಪುರ್ ಪೊಲೀಸ್ ಠಾಣೆಯ ಅಧಿಕಾರಿ ಸೋನಾ ಪ್ರಸಾದ್ ಸಿಂಗ್ ಅವರು ಹೇಳಿದ್ದಾರೆ.

ಆರೋಪಿ ಬಿಜೆಪಿ ನಾಯಕನನ್ನು ಬಂಂಧಿಸುವುದಕ್ಕಾಗಿ ಸಿತಾಮರ್ಹಿ ಜಿಲ್ಲೆಯ ಆತನ ನಿವಾಸದಲ್ಲಿ ನಾವು ಶೋಧ ನಡೆಸಿದ್ದೇವೆ. ಆದರೆ ಆರೋಪಿ ತಲೆಮರೆಸಿಕೊಂಡಿರುವುದಾಗಿ ಸಿಂಗ್ ತಿಳಿಸಿದ್ದಾರೆ.

ಅಪಘಾತ ಸಂಭವಿಸಿದ ವೇಳೆ ಸ್ವತಃ ಬೈತಾ ಅವರೇ ಬೊಲೊರೊ ವಾಹನ ಚಾಲನೆ ಮಾಡುತ್ತಿದ್ದರು ಎಂದು ಅನ್ಸಾರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕಳೆದ ಶನಿವಾರ ನಡೆದ ಭೀಕರ ಅಪಘಾತದಲ್ಲಿ ಅನ್ಸಾರಿ ಅವರು ಐವರು ಮೊಮ್ಮಕಳನ್ನು ಕಳೆದುಕೊಂಡಿದ್ದಾರೆ.

ಬೈತಾ ಚಾಲನೆ ಮಾಡುತ್ತಿದ್ದ ಬೊಲೆರೊ ವಾಹನ ನಿಯಂತ್ರಣ ಕಳೆದುಕೊಂಡು ಶಾಲಾ ಮಕ್ಕಳತ್ತ ನುಗ್ಗಿದ ಪರಿಣಾಮ 9 ಮಕ್ಕಳು ಸಾವನ್ನಪ್ಪಿದ್ದವು ಮತ್ತು 20 ಮಕ್ಕಳು ಗಾಯಗೊಂಡಿದ್ದರು.

ಮುಜಾಫರ್ ಪುರದ ಹೊರವಲಯದ ಸರ್ಕಾರಿ ಶಾಲೆಯ ಮಕ್ಕಳು ಮನೆಗೆ ತೆರಳಲು ಶಾಲೆಯ ಹೊರಗೆ ನಿಂತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೋಟೋ ಕ್ರೆಡಿಟ್: tribuneindia.com

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ