ನಟಿ ಶ್ರೀದೇವಿ ಪಾರ್ಥೀವ ಶರೀರ ರಾತ್ರಿ 11ಕ್ಕೆ ಮುಂಬೈಗೆ: ನಾಳೆ ಅಂತ್ಯಕ್ರಿಯೆ

ಮುಂಬೈ:ಫೆ-25: ದುಬೈನಲ್ಲಿ ಹೃದಯಾಘಾತದಿಂದ ನಿಧನಹೊಂದಿರುವ ನಟಿ ಶ್ರೀದೇವಿ ಅವರ ಪಾರ್ಥೀವ ಶರೀರ ಇಂದು ರಾತ್ರಿ 11 ಗಂಟೆಯ ಬಳಿಕ ಮುಂಬೈಗೆ ಬಂದು ತಲುಪಲಿದೆ.

ಮರಣೋತ್ತರ ಪರೀಕ್ಷೆ ವಿಳಂಬವಾಗಿದ್ದು ಪಾರ್ಥೀವ ಶರೀರ ತರಲು ವಿಳಂಬವಾಗುತ್ತಿದೆ ಎಂದು ಶ್ರೀದೇವಿ ಪತಿ ಬೋನಿ ಕಪೂರ್‌ ತಿಳಿಸಿದ್ದಾರೆ. ಈಗಾಗಲೇ ರಶೀದ್‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಅನಿಲ್‌ ಅಂಬಾನಿ ಮಾಲೀಕತ್ವದ ವಿಶೇಷ ಜೆಟ್‌ ವಿಮಾನದ ಮೂಲಕ ಶ್ರೀದೇವಿ ಅವರ ಪಾರ್ಥೀವ ಶರೀರವನ್ನು ತರಲಾಗುತ್ತಿದ್ದು, ಪತಿ ಬೋನಿ ಕಪೂರ್‌ ಮತ್ತು ಪುತ್ರಿ ಖುಷಿ ಮತ್ತು ಕೆಲ ಬಂಧುಗಳು ವಿಮಾನದಲ್ಲಿ ಬರಲಿದ್ದಾರೆ ಎಂದು ತಿಳಿದು ಬಂದಿದೆ. ಅಂತಿಮ ಸಂಸ್ಕಾರ ನಾಳೆ ವಿಲೆ ಪಾರ್ಲೆಯ ಪವನ್‌ ಹಂಸ್‌ನಲ್ಲಿ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಶ್ರೀದೇವಿ ಅವರ ಅಂಧೇರಿ ನಿವಾಸದ ಬಳಿ ಈಗಾಗಲೆ ಅಭಿಮಾನಿಗಳು ಜಮಾವಣೆಗೊಳ್ಳುತ್ತಿದ್ದು, ಭಾರೀ ಭದ್ರತೆಯನ್ನು ಕೈಗೊಳ್ಳಲಾಗಿದೆ.

bollywood actress,sridevi,funeral, tomorrow

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ