ಭಾರತದಲ್ಲಿ ತಯಾರಿಸಲಾಗಿರುವ ಕೋವಿಡ್-19 ಎರಡು ಲಸಿಕೆಗಳಿಂದ ವಿಶ್ವದ ಮನುಕುಲವನ್ನು ಸಂರಕ್ಷಿಸಲು ಭಾರತ ಸಜ್ಜಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಮೇಡ್ ಇನ್ ಇಂಡಿಯಾದ ಉತ್ಪನ್ನಗಳು ಮತ್ತು ಪರಿಹಾರಗಳಿಂದ ಇಡೀ ವಿಶ್ವಕ್ಕೆ ಪ್ರಯೋಜನ ಲಭಿಸಲಿದೆ ಎಂದು ಅವರು 16ನೇ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮ ಉದ್ದೇಶಿಸಿ ಮಾಡಿದ ವರ್ಚುವಲ್ ಭಾಷಣದಲ್ಲಿ ತಿಳಿಸಿದರು. ಅನಿವಾಸಿ ಭಾರತೀಯರು ಕೋವಿಡ್-19 ವಿರುದ್ಧದ ಹೋರಾಟಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಅವರು ಪಿಎಂ-ಕೇರ್ ನಿಧಿಗೆ ನೀಡಿರುವ ಕೊಡುಗೆ ದೇಶದ ಆರೋಗ್ಯ ಸೇವಾ ವಲಯವನ್ನು ಬಲಪಡಿಸಿದೆ ಎಂದು ತಿಳಿಸಿದರು. ಬ್ರಾಂಡ್ ಇಂಡಿಯಾ ಬಲಪಡಿಸಲು ಅನಿವಾಸಿ ಭಾರತೀಯರು ನಿರ್ಣಾಯಕ ಪಾತ್ರ ವಹಿಸಬೇಕು. ಪ್ರವಾಸಿ ಭಾರತೀಯರು ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನು ಬಳಸಬೇಕು. ಇದರಿಂದ ಜಾಗತಿಕ ಮಟ್ಟದಲ್ಲಿ ಭಾರತೀಯ ಉತ್ಪನ್ನಗಳ ಬಗ್ಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಯುವ ಸಮುದಾಯ ದೇಶದ ಸಂಸ್ಕøತಿ ಮತ್ತು ಹಿರಿಮೆಯನ್ನು ಜಗತ್ತಿಗೆ ತಿಳಿಸಲು ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದರು. ಶಿಕ್ಷಣ ಕ್ಷೇತ್ರದಿಂದ ಹಿಡಿದು ಉದ್ಯಮ ವಲಯದವರೆಗೆ ಭಾರತದಲ್ಲಿ ರಚನಾತ್ಮಕ ಸುಧಾರಣೆಗಳನ್ನು ತರುವ ಮೂಲಕ ಆಮೂಲಾಗ್ರ ಬದಲಾವಣೆಗೆ ನಾಂದಿ ಹಾಡಲಾಗಿದೆ. ದೇಶದಲ್ಲಿ ತಯಾರಿಕೆ ಅಥವಾ ಉತ್ಪಾದನೆ ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರವು ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕಧನ ಆರಂಭಿಸಿದೆ. ಇದು ಅಲ್ಪಾವಧಿಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಮಾತನಾಡಿ, ಕೋವಿಡ್ ಸೋಂಕು ದೇಶಕ್ಕೆ ಹಲವು ಪಾಠಗಳನ್ನು ಕಲಿಸಿತು. ಅದರಲ್ಲೂ ಮುಖ್ಯವಾಗಿ, ಸ್ವಾವಲಂಬಿ ಬದುಕು ಅಗತ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟಿತು ಎಂದರು. ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಭಾರತ ಸ್ವಂತ ಲಸಿಕೆ ತಯಾರಿಸಿಕೊಳ್ಳುವದರ ಜೊತೆಗೆ ವಿಶ್ವದ ಇತರೆ ರಾಷ್ಟ್ರಗಳಿಗೆ ಪೂರೈಸಲು ಮುಂದಾಗಿದೆ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿ ಸುರಿನಾಮ್ ರಾಷ್ಟ್ರದ ಅಧ್ಯಕ್ಷ ಚಂದ್ರಿಕಾ ಪೆರ್ಸಾದ್ ಸಂತೋಖಿ ಮಾತನಾಡಿ, ಸುರಿನಾಮ್ ಭಾರತದೊಂದಿಗೆ ದೀರ್ಘ ಬಾಂಧವ್ಯ ಹಂಚಿಕೊಂಡಿದೆ. ಉಭಯ ರಾಷ್ಟ್ರಗಳು ಪುರಾತನ, ಪರಂಪರೆ, ಸಂಸ್ಕøತಿ ಮತ್ತು ಆಚರಣೆಗಳನ್ನು ನಿರ್ವಹಿಸುತ್ತಾ ಬಂದಿವೆ. ಈ ನಿಟ್ಟಿನಲ್ಲಿ ಎರಡೂ ರಾಷ್ಟ್ರಗಳು ವ್ಯಾಪಾರ ವಹಿವಾಟುಗಳನ್ನು ಬಲಪಡಿಸಲು ಆದ್ಯತೆಯ ಗಮನ ನೀಡಬೇಕಿದೆ ಎಂದು ತಿಳಿಸಿದರು.
Related Articles
ಟೆಸ್ಟ್, ಟ್ರ್ಯಾಕ್, ಟ್ರೀಟ್, ಲಸಿಕೆಗೆ ಒತ್ತು ನೀಡಿ: ಸಿಎಂಗಳಿಗೆ ಪ್ರಧಾನಿ ಮೋದಿ 4ಟಿ ಮಂತ್ರ
July 17, 2021
Varta Mitra News - SP
ರಾಷ್ಟ್ರೀಯ
Comments Off on ಟೆಸ್ಟ್, ಟ್ರ್ಯಾಕ್, ಟ್ರೀಟ್, ಲಸಿಕೆಗೆ ಒತ್ತು ನೀಡಿ: ಸಿಎಂಗಳಿಗೆ ಪ್ರಧಾನಿ ಮೋದಿ 4ಟಿ ಮಂತ್ರ
Seen By: 93 ಹೊಸದಿಲ್ಲಿ: ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ರಾಜ್ಯಗಳಲ್ಲಿ ಮೂರನೇ ಅಲೆ ತಡೆಗೆ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರು, ಟೆಸ್ಟ್, [more]
ಸೈಕಲ್ ಮಾರಾಟದಲ್ಲಿ ಶೇ.250ರಷ್ಟು ಏರಿಕೆ | ಆರೋಗ್ಯಕ್ಕೂ ಇದೇ ಅಸ್ತ್ರ ಸೈಕ್ಲಿಂಗ್ ಮೇಲಿನ ಆಸಕ್ತಿಗೆ ಮೂಲೆ ಸೇರಿದ ಬೈಕ್ !
October 24, 2020
Varta Mitra News - SP
ರಾಷ್ಟ್ರೀಯ, ಮತ್ತಷ್ಟು
Comments Off on ಸೈಕಲ್ ಮಾರಾಟದಲ್ಲಿ ಶೇ.250ರಷ್ಟು ಏರಿಕೆ | ಆರೋಗ್ಯಕ್ಕೂ ಇದೇ ಅಸ್ತ್ರ ಸೈಕ್ಲಿಂಗ್ ಮೇಲಿನ ಆಸಕ್ತಿಗೆ ಮೂಲೆ ಸೇರಿದ ಬೈಕ್ !
Seen By: 78 ಹೊಸದಿಲ್ಲಿ: ಕೋವಿಡ್-19 ನಿಯಂತ್ರಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತಹ ಮಹತ್ವವಾಗಿದ್ದು, ಅನೇಕ ಮಂದಿ ಸೈಕ್ಲಿಂಗ್ನತ್ತ ಒಲವು ತೋರಿರುವುದರಿಂದ ಸೈಕಲ್ಗಳಿಗೀಗ ಬೇಡಿಕೆ ಹೆಚ್ಚಿದೆ. ಮಾತ್ರವಲ್ಲದೆ, [more]
ರಾಜ್ಯದಲ್ಲಿ ಕೊರೋನಾ ಇಳಿಮುಖ: ಬೆಂಗಳೂರಿನಲ್ಲಿ 352 ಸೇರಿ ಇಂದು 1,564 ಪ್ರಕರಣ ಪತ್ತೆ, 59 ಮಂದಿ ಸಾವು!
July 5, 2021
Varta Mitra News - SP
ರಾಜ್ಯ
Comments Off on ರಾಜ್ಯದಲ್ಲಿ ಕೊರೋನಾ ಇಳಿಮುಖ: ಬೆಂಗಳೂರಿನಲ್ಲಿ 352 ಸೇರಿ ಇಂದು 1,564 ಪ್ರಕರಣ ಪತ್ತೆ, 59 ಮಂದಿ ಸಾವು!
Seen By: 46 ಬೆಂಗಳೂರು July 05: ರಾಜ್ಯದಲ್ಲಿ ಕೊರೋನಾ ಕಡಿಮೆಯಾಗುತ್ತಿದ್ದು ಇಂದು 1,564 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 28,53,643ಕ್ಕೆ ಏರಿಕೆಯಾಗಿದೆ. [more]