ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿರುವುದು ಹೆಮ್ಮೆಯ ವಿಷಯ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದ್ದಾರೆ. ಬಿಹಾರದ ಜನತೆಗೆ ಪ್ರಧಾನಮಂತ್ರಿ ಅವರು ಬರೆದಿರುವ ಬಹಿರಂಗ ಪತ್ರದಲ್ಲಿ, ಕೇಂದ್ರದಲ್ಲಿರುವ ಎನ್ಡಿಎ ಸರ್ಕಾರ ಹಾಗೂ ಬಿಹಾರದ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರದ ವಿಶೇಷ ಪ್ರಯತ್ನಗಳಿಂದ ಬಿಹಾರ ಈ ದಶಕದಲ್ಲಿ ಅಭಿವೃದ್ಧಿಯ ಹೊಸ ಮೈಲುಗಲ್ಲು ಸಾಧಿಸಲಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಬಿಹಾರದ ಅಭಿವೃದ್ಧಿಗೆ ತಾವು ಬದ್ಧವಿರುವುದಾಗಿ ಪ್ರಧಾನಮಂತ್ರಿ ಹೇಳಿದ್ದಾರೆ. ಎನ್ಡಿಎ ಸರ್ಕಾರದ ಅವಧಿಯಲ್ಲಿ ಬಿಹಾರ ಅಭಿವೃದ್ಧಿ ಕಂಡಿದೆ. ಈ ಸಂಬಂಧ ತನ್ನ ರಿಪೋರ್ಟ್ ಕಾರ್ಡ್ಅನ್ನು ಸಹ ಜನರ ಮುಂದಿಟ್ಟಿದೆ. ಎನ್ಡಿಎ ಸರ್ಕಾರ ಮಾತ್ರ ಬಿಹಾರದಲ್ಲಿ ಅಭಿವೃದ್ಧಿಯ ವೇಗವನ್ನು ಸುಸ್ಥಿರವಾಗಿ ಕಾಯ್ದುಕೊಳ್ಳಲಿದೆ ಎಂಬ ನಂಬಿಕೆ ಬಿಹಾರದ ಜನರಲ್ಲಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ವಿದ್ಯುತ್ಛ್ಕ್ತಿ, ನೀರು, ರಸ್ತೆ, ಶಿಕ್ಷಣ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಲಯಗಳಲ್ಲಿ ಬಿಹಾರದಲ್ಲಿ ಎನ್ಡಿಎ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಪತ್ರದಲ್ಲಿ ವಿವರಿಸಿದ್ದಾರೆ.
Related Articles
ಮೋದಿ ನೀಲಕೇಶದ ಗುಟ್ಟು ಬಿಟ್ಟುಕೊಟ್ಟ ಪೇಜಾವರಶ್ರೀ
December 28, 2020
Varta Mitra News - SP
ರಾಜ್ಯ, ಪ್ರಧಾನಿ ಮೋದಿ
Comments Off on ಮೋದಿ ನೀಲಕೇಶದ ಗುಟ್ಟು ಬಿಟ್ಟುಕೊಟ್ಟ ಪೇಜಾವರಶ್ರೀ
Seen By: 78 ಬಾಗಲಕೋಟೆ:ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಗಡ್ಡ ಮತ್ತು ತಲೆಕೂದಲು ಉದ್ದ ಬಿಟ್ಟಿರುವುದು ಭರೀ ಕುತೂಹಲ ಕೆರಳಿಸಿತ್ತು. ಕೊರೋನಾ ಸಂಕಷ್ಟ ಶುರುವಾದ ಬಳಿಕ ಮೋದಿ [more]
ದೀಪಾವಳಿ ಗಿಫ್ಟ್ ನೀಡಿದ ನಮೋ: ಕೇವಲ 59 ನಿಮಿಷಗಳಲ್ಲಿ 1 ಕೋಟಿವರೆಗೂ ಸಾಲ ಸೌಲಭ್ಯ
November 2, 2018
VD
ಪ್ರಧಾನಿ ಮೋದಿ, ವಾಣಿಜ್ಯ
Comments Off on ದೀಪಾವಳಿ ಗಿಫ್ಟ್ ನೀಡಿದ ನಮೋ: ಕೇವಲ 59 ನಿಮಿಷಗಳಲ್ಲಿ 1 ಕೋಟಿವರೆಗೂ ಸಾಲ ಸೌಲಭ್ಯ
Seen By: 121 ಹೊಸದಿಲ್ಲಿ: ದೀಪಾವಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಹೌದು, ಈ ವರ್ಗದ ಉದ್ಯಮಿಗಳಿಗೆ ಕೇವಲ [more]
ಏಳು ದಶಕಗಳ ಕಾಯುವಿಕೆಗೆ ಸಿಕ್ಕ ಪ್ರತಿಫಲ – ಹೆಬ್ಬಾರ ಗುಡ್ಡಕ್ಕೆ ಕೊನೆಗೂ ಬಂದ ವಿದ್ಯುತ್
June 6, 2018
VD
ಉತ್ತರ ಕನ್ನಡ, ದಿನದ ವಿಶೇಷ ಸುದ್ದಿಗಳು, ಲೇಖನಗಳು, ರಾಜ್ಯ, ಕರಾವಳಿ, ಪ್ರಧಾನಿ ಮೋದಿ
Comments Off on ಏಳು ದಶಕಗಳ ಕಾಯುವಿಕೆಗೆ ಸಿಕ್ಕ ಪ್ರತಿಫಲ – ಹೆಬ್ಬಾರ ಗುಡ್ಡಕ್ಕೆ ಕೊನೆಗೂ ಬಂದ ವಿದ್ಯುತ್
Seen By: 1,025 ಗುರುಪ್ರಸಾದ ಕಲ್ಲಾರೆ ಬೆಂಗಳೂರು : ಆ ಊರಿನಲ್ಲಿ ಇದುವರೆಗೂ ಜನಸಾಮಾನ್ಯರ ಪಾಲಿಗೆ ಬೆಳಕಾಗಿದ್ದುದು ಲಾಟಿನು, ಸೀಮೆ ಎಣ್ಣೆಯ ಬುಡ್ಡಿ ದೀಪಗಳು ಮಾತ್ರ. ಆಧುನಿಕ [more]