ಕೋವಿಡ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಭಾರತ, ವಿಶ್ವದ ಔಷದಾಲಯವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದ್ದಾರೆ. ಲಸಿಕೆಗಳ ಸಂಶೋಧನೆಯಲ್ಲಿ ಭಾರತ ಇಡೀ ವಿಶ್ವದಲ್ಲಿ ಮುಂಚೂಣಿಯಲ್ಲಿ ಇರುವುದು ಮಾತ್ರವಲ್ಲದೇ ವಿಶ್ವದ ಲಸಿಕೆ ಉತ್ಪಾದನಾ ಕ್ಷೇತ್ರದಲ್ಲೂ ಅತ್ಯಂತ ನಿರ್ಣಾಯಕವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಇತ್ತೀಚೆಗೆ ಪ್ರಧಾನಮಂತ್ರಿ, ದೇಶೀಯವಾಗಿ ಲಸಿಕೆ ಉತ್ಪಾದಿಸುತ್ತಿರುವ ಮೂರು ಪ್ರಮುಖ ನಗರಗಳಲ್ಲಿನ ಲಸಿಕಾ ತಯಾರಿಕಾ ಕಂಪೆನಿಗಳಿಗೆ ಭೇಟಿ ನೀಡಿ ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನಾ ಪ್ರಕ್ರಿಯೆಯನ್ನು ಖುದ್ದು ಪರಿಶೀಲಿಸಿದ್ದಾರೆ. ಅಹಮದಾಬಾದ್ನಲ್ಲಿರುವ ಝೈಡಸ್ ಬಯೋಟೆಕ್ ಪಾರ್ಕ್, ಹೈದರಾಬಾದ್ನಲ್ಲಿರುವ ಭಾರತ್ ಬಯೋಟೆಕ್ ಮತ್ತು ಪುಣೆಯಲ್ಲಿರುವ ಸೆರಂ ಇನ್ಸ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪೆನಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಪೈಕಿ 2 ಕಂಪೆನಿಗಳು ದೇಶೀಯವಾಗಿ ಕೋವಿಡ್ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿವೆ. ಇಡೀ ಮಾನವ ಕುಲವನ್ನು ಸಂರಕ್ಷಿಸುವ ಸಲುವಾಗಿ ಕೋಟ್ಯಂತರ ಪ್ರಮಾಣದಲ್ಲಿ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಲಸಿಕಾ ಉತ್ಪಾದನಾ ಸಂಸ್ಥೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ವಿಜ್ಞಾನಿಗಳಿಗೆ ನೈತಿಕ ಸ್ಥೈರ್ಯ ತುಂಬುವ ಉದ್ದೇಶದಿಂದ ಭೇಟಿ ನೀಡಿರುವುದಾಗಿ ತಿಳಿಸಿದ್ದರು ಮತ್ತು ಸಂಕಷ್ಟದ ಸಂದರ್ಭದಲ್ಲಿ ಲಸಿಕೆ ಅಭಿವೃದ್ಧಿ ಪಡಿಸುತ್ತಿರುವ ವಿಜ್ಞಾನಿಗಳ ಪ್ರಯತ್ನಗಳನ್ನು ಅಭಿನಂದಿಸಿದ್ದರು.
Related Articles
ಇಂದು ಎಸ್ಸೆಸ್ಸೆಲ್ಸಿ ಕೊನೆ ಪರೀಕ್ಷೆ
Seen By: 63 ಬೆಂಗಳೂರು: ರಾಜ್ಯದಲ್ಲಿ ಎಸ್ಎಸ್ಎಲ್ಸಿ ಭಾಷಾ ವಿಷಯಕ್ಕೆ ಸಂಬಂಸಿದ ಪರೀಕ್ಷೆಗಳು ಗುರುವಾರ ನಡೆಯಲಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪರೀಕ್ಷೆ ನಡೆಯಲಿದೆ. ಕೋವಿಡ್ ಕಾರಣಕ್ಕಾಗಿ [more]
ಈಗ ಲಾಕ್ಡೌನ್ ಇಲ್ಲದಿದ್ದರೂ ಕೊರೋನಾ ವೈರಾಣು ಇದೆ | ಮರೆಯಬೇಡಿ, ಎಚ್ಚರವಹಿಸಿ ಮೋದಿ ಜಾಗೃತಿ ಕರೆ
October 21, 2020
Varta Mitra News - SP
ರಾಷ್ಟ್ರೀಯ
Comments Off on ಈಗ ಲಾಕ್ಡೌನ್ ಇಲ್ಲದಿದ್ದರೂ ಕೊರೋನಾ ವೈರಾಣು ಇದೆ | ಮರೆಯಬೇಡಿ, ಎಚ್ಚರವಹಿಸಿ ಮೋದಿ ಜಾಗೃತಿ ಕರೆ
Seen By: 32 ಹೊಸದಿಲ್ಲಿ: ಕೊರೋನಾ ವಿರುದ್ಧದ ಹೋರಾಟದಲ್ಲಿ ದೇಶ ಬಹಳಷ್ಟು ಮುಂದೆ ಸಾಗಿರಬಹುದು. ಆದರೆ ದೇಶದಲ್ಲಿ ಲಾಕ್ಡೌನ್ ಸಡಿಲಗೊಂಡಿದ್ದರೂ, ವೈರಾಣು ಹಾಗೆಯೇ ಉಳಿದಿದೆ ಎಂಬುದನ್ನು ಜನರು [more]
ಸುಳ್ಳು ಸುದ್ದಿ ಹರಡಿ ಜನರನ್ನು ಕೊಲ್ಲುವ ಸೋಷಿಯಲ್ ಮೀಡಿಯಾ:ಬೈಡನ್ ಕಿಡಿ
July 19, 2021
Varta Mitra News - SP
ಅಂತರರಾಷ್ಟ್ರೀಯ
Comments Off on ಸುಳ್ಳು ಸುದ್ದಿ ಹರಡಿ ಜನರನ್ನು ಕೊಲ್ಲುವ ಸೋಷಿಯಲ್ ಮೀಡಿಯಾ:ಬೈಡನ್ ಕಿಡಿ
Seen By: 258 ವಾಷಿಂಗ್ಟನ್: ಸೋಷಿಯಲ್ ಮೀಡಿಯಾಗಳು ಜನರ ಪಾಲಿಗೆ ಕಂಟಕಗಳಾಗುತ್ತಿವೆ ಎಂಬ ಗಂಭೀರ ಆರೋಪದ ನಡುವೆಯೇ, ಫೇಸ್ಬುಕ್ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳು ಕೊರೋನಾ ವೈರಾಣು ಮತ್ತು [more]