ಮದ್ಯ ಸಿಗದೆ ಕಂಗಾಲಾಗಿದ್ದ ಮೂವರು ಮದ್ಯವ್ಯಸನಿಗಳು ಬಣ್ಣದ ದ್ರಾವಣವನ್ನು(ಪೇಂಟ್ ವಾರ್ನಿಷ್) ಕುಡಿದು ಸಾವು

ಚೆನ್ನೈ,ಏ.6-ದೇಶಾದ್ಯಂತ ಲಾಕ್‍ಡೌನ್ ಇರುವ ಹಿನ್ನೆಲೆಯಲ್ಲಿ ಎಲ್ಲೂ ಮದ್ಯ ಸಿಗದೆ ಕಂಗಾಲಾಗಿದ್ದ ಮೂವರು ಮದ್ಯವ್ಯಸನಿಗಳು ಬಣ್ಣದ ದ್ರಾವಣವನ್ನು(ಪೇಂಟ್ ವಾರ್ನಿಷ್) ಕುಡಿದು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಚೆಂಗಲ್ಪಟ್ಟ ಗ್ರಾಮದಲ್ಲಿ ನಡೆದಿದೆ.

ಚೆಂಗಲ್ಪಟ್ಟು ನಿವಾಸಿಗಳಾದ ಶಿವಶಂಕರ್, ಪ್ರದೀಪ್ ಮತ್ತು ಸಿವರಾಮನ್ ಮೃತಪಟ್ಟಿರುವ ಮದ್ಯವ್ಯಸನಿಗಳು.

ಮದ್ಯ ಸಿಗದೆ ಕಂಗಾಲಾಗಿದ್ದ ಇವರು ನಿನ್ನೆ ವಾರ್ನಿಷ್ ಮಿಶ್ರಣದ ಪೇಂಟ್‍ನ್ನು ಕುಡಿದಿದ್ದಾರೆ. ವಾಂತಿ ಕಾಣಿಸಿಕೊಂಡು ತೀವ್ರ ಗಂಭೀರ ಸ್ಥಿತಿಯಲ್ಲಿದ್ದ ಇವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೂವರು ಸಾವನ್ನಪ್ಪಿದ್ದಾರೆ.

ಪ್ರಾಥಮಿಕ ತನಿಖೆ ವರದಿ ಪ್ರಕಾರ ತೀವ್ರ ಮದ್ಯವಸ್ಯನಿಗಳಾಗಿದ್ದ ಇವರಿಗೆ ಲಾಕ್‍ಡೌನ್‍ನಿಂದಾಗಿ ಮದ್ಯ ಸೇವನೆಗೆ ಹಾಗೂ ಸಂಗ್ರಹಕ್ಕೆ ಅವಕಾಶ ದೊರೆಯದೆ ಕಾರಣ ಹತಾಶರಾಗಿದ್ದ ಇವರು ವಾರ್ನಿಶ್ ಬೆರೆಸಿಕೊಂಡು ಸೇವನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ