ವಿನಯ್​ ಗುರೂಜಿಗೆ 50 ಲಕ್ಷಕ್ಕೆ ಬೇಡಿಕೆ ಇಟ್ಟು ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ಆರೋಪಿಗಳ ಬಂಧನ

ಬೆಂಗಳೂರು: ರಾಜ್ಯದ ಹೆಸರಾಂತ ಅವಧೂತ ವಿನಿಯ್ ಗೂರೂಜಿಗೆ ಬ್ಲ್ಯಾಕ್ಮೇಲ್​​​ ಮಾಡಿ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ನಾಲ್ವರು ಕಿರಾತಕರನ್ನು ಇಂದು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ

ಬಂಧಿತರನ್ನು ಮುನಿರಾಜ್, ಮನೋಜ್, ಮುರಳಿ ಮತ್ತು ರವಿಕುಮಾರ್ ಎಂದು ಗುರುತಿಸಲಾಗಿದೆ.  ಮುನಿರಾಜ್ ಅಲಿಯಾಸ್ ಟೋಕನ್ ಮುನಿರಾಜ್ ಸೇರಿ 6 ಜನರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಮುನಿರಾಜು ನೇತೃತ್ವದಲ್ಲೇ ಈ ಟೀಂ ಬ್ಲಾಕ್​ ಮೇಲ್​ ಮಾಡಿತ್ತು ಎನ್ನಲಾಗಿದೆ. ಈತ ಕಾವೇರಿ ಯೂಟ್ಯೂಬ್ ಚಾನೆಲ್ ಮಾಲೀಕ‌ ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ ಸಿಸಿಬಿ ಪೊಲೀಸರು ಆರೋಪಿಗಳ ವಿಚಾರಣೆ ನಡೆಸಿದ್ದಾರೆ.

ಕಿಡಿಗೇಡಿಗಳು ಒಂದು ತಿಂಗಳಿನಿಂದ ಅವಧೂತ ವಿನಯ್​ ಗುರೂಜಿಗೆ ಬ್ಲಾಕ್​  ಮೇಲ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಅವರು, ಹಣ ಕೊಡದಿದ್ದರೆ ಗುರೂಜಿ ವಿರುದ್ಧದ ಅಪಪ್ರಚಾರದ ವಿಡಿಯೋ ವೈರಲ್​ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಅಷ್ಟೇ ಅಲ್ಲದೇ, ಹಣದ ವಿಚಾರವಾಗಿ ವಾಟ್ಸ್ಯಾಪ್​ ವಿಡಿಯೋ ಕಾಲ್​ ಮಾಡಿ ಬೆದರಿಕೆ ಜೊತೆಗೆ ಒತ್ತಡ ಕೂಡ ಹೇರುತ್ತಿದ್ದರು ಎಂದು ತಿಳಿದು ಬಂದಿದೆ.

ಈ ಸಂಬಂಧ ವಿನಯ್​ ಗುರೂಜಿ ಆಪ್ತ ಪ್ರಶಾಂತ್ ಸಿಸಿಬಿ​ ಪೊಲೀಸರಿಗೆ ದೂರು ನೀಡಿದ್ದರು.  ದೂರು ದಾಖಲಿಸಿಕೊಂಡ ಪೊಲೀಸರು  ಪ್ರಕರಣದ ಬೆನ್ನತ್ತಿದ್ದರು.

ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಕೆಂಗೇರಿ ಬಳಿ ನಾಲ್ವರು ಆರೋಪಿಗಳು ಸಿಕ್ಕಿ ಬಿದ್ದಿದ್ದರು. ಈ ಸಂಬಂಧ ಸಿಸಿಬಿ‌ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ