ಹುಬ್ಬಳ್ಳಿ ಕೋರ್ಟ್ ಆವರಣದಲ್ಲಿ ಕಲ್ಲು ತೂರಾಟ; ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಯತ್ನ

ಹುಬ್ಬಳ್ಳಿಹುಬ್ಬಳ್ಳಿಯಲ್ಲಿ ಪಾಕ್ಪರ ಘೋಷಣೆ ಕೂಗಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಪೊಲೀಸರು ಇಂದು ಕೋರ್ಟ್ಮುಂದೆ ಹಾಜರುಪಡಿಸುವ ವೇಳೆ ಹೈಡ್ರಾಮಾ ನಡೆದಿದೆತಾಲಿಬ್ ಮಾಜಿದ್, ಆಮಿರ್ ವಾನಿ, ಬಾಷಿತ್ ಸೋಫಿ ಮೂವರು ಆರೋಪಿಗಳನ್ನು ಕೋರ್ಟ್ ಬಳಿ ಕರೆತಂದಾಗ ವಕೀಲರು ಮತ್ತು ಸಾರ್ವಜನಿಕರುಭಾರತ್ ಮಾತಾ ಕಿ ಜೈಘೋಷಣೆಯನ್ನು ಕೂಗಿದ್ದಾರೆ.

ಸಾರ್ವಜನಿಕರು ‘ದೇಶದ್ರೋಹಿಗಳಿಗೆ ಧಿಕ್ಕಾರ’ ಎಂದು  ಆರೋಪಿಗಳು, ಪೊಲೀಸರ ಎದುರೇ ಜೋರಾಗಿಯೇ ಕೂಗಿದರು. ಈ ವೇಳೆ ಕಾಶ್ಮೀರಿ ವಿದ್ಯಾರ್ಥಿಗಳು ತಲೆತಗ್ಗಿಸಿ ಕೋರ್ಟ್​ ಒಳಗೆ ಹೋದರು. ವಿಚಾರಣೆ ಮುಗಿಸಿಕೊಂಡು ಹೊರ ಬಂದ ಕೂಡಲೇ ಮೂವರು ವಿದ್ಯಾರ್ಥಿಗಳ ಮೇಲೆ ಸಾರ್ವಜನಿಕರು ಮತ್ತು ವಕೀಲರು ಹಲ್ಲೆಗೆ ಮುಂದಾದರು. ಪೊಲೀಸ್​ ವಾಹನಕ್ಕೆ ಕಲ್ಲು ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ಕೋರ್ಟ್​ ಆವರಣದಲ್ಲೇ ಜನರು ರೊಚ್ಚಿಗೆದ್ದಿದ್ದರಿಂದ ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ಸಾರ್ವಜನಿಕರನ್ನು ಸಮಾಧಾನಪಡಿಸಲು ಹರಸಾಹಸಪಟ್ಟರು.

ಹುಬ್ಬಳ್ಳಿ 3ನೇ ಜೆಎಂಎಫ್​ಸಿ ಕೋರ್ಟ್​​ ಆರೋಪಿಗಳಿಗೆ 14 ದಿನಗಳ ಕಾಲ ಅಂದರೆ ಮಾರ್ಚ್​ 2ರವರೆಗೆ ನ್ಯಾಯಾಂಗ ಬಂಧನದಲ್ಲಿರಿಸಿ ಆದೇಶ ನೀಡಿದೆ. ಮೂವರು ಆರೋಪಿಗಳು ವಕೀಲರನ್ನು ನೇಮಿಸಿಕೊಳ್ಳಲು ಕಾಲಾವಕಾಶ ಕೋರಿದ್ದಾರೆ. ಹುಬ್ಬಳ್ಳಿ ಕೋರ್ಟ್ ಸುತ್ತ ಬಿಗಿ ಪೊಲೀಸ್ ಬಿಗಿ ಬಂದೋ ಬಸ್ತ್​ ಏರ್ಪಡಿಸಿದ್ದರೂ ಈ ಕಲಹ ಉಂಟಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ