ಕೊನೆಗೂ ಖಾತೆ ಹಂಚಿಕೆ: ರಮೇಶ್​​ ಜಾರಕಿಹೊಳಿಗೆ ಸಂಪನ್ಮೂಲ ಖಾತೆ, ಕೆ. ಸುಧಾಕರ್ ಗೆ ವೈದ್ಯಕೀಯ ಶಿಕ್ಷಣ ಖಾತೆ

ಬೆಂಗಳೂರು : ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿ ಸಿಎಂ ಪಟ್ಟಿ ಸಿದ್ದಪಡಿಸಿದ್ದು, ಅವರ ಬೇಡಿಕೆಯಂತೆಯೇ ಮುಖ್ಯಮಂತ್ರಿಗಳು ಅವರಿಗೆ ಖಾತೆಯನ್ನು ಹಂಚಿಕೆ ಮಾಡಿದ್ದಾರೆ ಎನ್ನಲಾಗಿದೆ.

ರಮೇಶ್​ ಜಾರಕಿಹೊಳಿ ಬೇಡಿಕೆಯಂತೆಯೇ ಸಿಎಂ ಬಿಎಸ್​ ಯಡಿಯೂರಪ್ಪ ಅವರಿಗೆ, ಜಲಸಂಪನ್ಮೂಲ ಖಾತೆ ನೀಡಿದ್ದು, ಶಿವರಾಮ್​ ಹೆಬ್ಬಾರ್​ಗೆ  ಪೌರಾಡಳಿತ, ಬಿ.ಸಿ.ಪಾಟೀಲ್​ – ಇಂಧನ, ನಾರಾಯಣಗೌಡ- ಆಹಾರ ಮತ್ತು ನಾಗರಿಕ ಸರಬರಾಜು, ಶ್ರೀಮಂತ ಪಾಟೀಲ್​- ಸಕ್ಕರೆ ಹಾಗೂ ಕೆ.ಸುಧಾಕರ್- ವೈದ್ಯಕೀಯ ಖಾತೆ ಹಂಚಿಕೆ ಮಾಡಿದ್ದಾರೆ.

ಚುನಾವಣೆಯಲ್ಲಿ ಗೆದ್ದಗಿನಿಂದಲೂ ರಮೇಶ್​ ಜಾರಕಿಹೊಳಿ ಜಲಸಂಪನ್ಮೂಲ ಖಾತೆಗೆ ಪಟ್ಟು ಹಿಡಿದಿದ್ದರು. ತಮಗೆ ಡಿಸಿಎಂ ಸ್ಥಾನ ನೀಡದಿದ್ದರೂ ತಮಗೆ ಜಲಸಂಪನ್ಮೂಲ ಖಾತೆಯೇ ಬೇಕು ಎಂಬ ಬೇಡಿಕೆ ಸಲ್ಲಿಸಿದ್ದರು.  ಸಿಎಂ ಬಿಎಸ್​ ಯಡಿಯೂರಪ್ಪ ಕೂಡ ಅವರಿಗೆ ಜಲಸಂಪನ್ಮೂಲ ಖಾತೆ ನೀಡಲು ಒಲವು ತೋರಿದ್ದರು. ಆದರೆ, ಇದಕ್ಕೆ ಕೆಲ ಮೂಲ ಬಿಜೆಪಿ ನಾಯಕರು ಅಸಮಾಧಾನ ತೋರಿದ್ದರು.

ಇದರ ಜೊತೆಗೆ ನೂತನ ಸಚಿವ ರಮೇಶ್​ ಜಾರಕಿಹೊಳಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿಯನ್ನು ನೀಡಲಾಗಿದೆ.  ಈ ಮೂಲಕ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಗೋಕಾಕ್​ ಶಾಸಕರ ಶಕ್ತಿಯನ್ನು ಸಿಎಂ ಹೆಚ್ಚಿಸಿದ್ದಾರೆ ಎನ್ನಲಾಗಿದೆ.

ನೂತನ ಸಚಿವರಿಗೆ ಹಂಚಿಕೆಯಾದ ಖಾತೆ ಪಟ್ಟಿ

ರಮೇಶ್ ಜಾರಕಿಹೊಳಿ – ನೀರಾವರಿಬಿ.ಸಿ.ಪಾಟೀಲ್ – ಇಂಧನ ಖಾತೆ

ಡಾ.ಸುಧಾಕರ್ – ವೈದ್ಯಕೀಯ ಶಿಕ್ಷಣ

ನಾರಾಯಣಗೌಡ – ಆಹಾರ & ನಾಗರಿಕ

ಶಿವರಾಂ ಹೆಬ್ಬಾರ್ – ಪೌರಾಡಳಿತ

ಎಸ್.ಟಿ. ಸೋಮಶೇಖರ್ – ಸಹಕಾರ

ಭೈರತಿ ಬಸವರಾಜು – ನಗರಾಭಿವೃದ್ಧಿ

ಗೋಪಾಲಯ್ಯ – ಕಾರ್ಮಿಕ ಖಾತೆ

ಶ್ರೀಮಂತ ಪಾಟೀಲ್ – ಸಕ್ಕರೆ

ಆನಂದ್ ಸಿಂಗ್ – ಗಣಿ ಮತ್ತು ಭೂ ವಿಜ್ಞಾನ

ಯುವಜನ ಸೇವೆ ಮತ್ತು ಕ್ರೀಡೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ