ದೇಶದ ಯಾವ ಭಾಗವನ್ನೂ ಕಡೆಗಣಿಸಬಾರದು, ಗಾಂಧಿ-ನೆಹರು ಕನಸು ನನಸಾಗಲಿ; ರಾಮನಾಥ್ ಕೋವಿಂದ್

ಹೊಸದಿಲ್ಲಿ; ದೇಶದ ಯಾವ ಭಾಗವೂ ಹಿಂದುಳಿಯಬಾರದು. ಯಾವ ಭಾಗವನ್ನೂ ಕಡೆಗಣಿಸಬಾರದು, ಇಡೀ ದೇಶ ಸಧೃಡವಾಗಬೇಕು. ಮಹಾತ್ಮ ಗಾಂಧಿ ಹಾಗೂ ಜವಹರ್ಲಾಲ್ನೆಹರು ಕಂಡ ಕನಸು ನನಸಾಗಬೇಕು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ಅಭಿಪ್ರಾಯಪಟ್ಟಿದ್ದಾರೆ.

2020 ಕೇಂದ್ರ ಬಜೆಟ್​ ಮೇಲಿನ ಅಧಿವೇಶನದಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯನ್ನು ಉದ್ದೇಶಿಸಿ ಇಂದು ಭಾಷಣ ಮಾಡಿರುವ ರಾಷ್ಟ್ರಪತಿ ರಾಮನಾಥ್​ ಕೋವಿಂದ್, “ಭಾರತದ ಸಂವಿಧಾನ ಎಲ್ಲರಿಗೂ ಮಾರ್ಗದರ್ಶಕ. ಹೀಗಾಗಿ ಎಲ್ಲರೂ ಸಂವಿಧಾನಬದ್ಧರಾಗಿ ಕಾರ್ಯನಿರ್ವಹಿಸಬೇಕಿದೆ. ನ.26ಕ್ಕೆ ಸಂವಿಧಾನ ರಚನೆಯಾಗಿ 70 ವರ್ಷ. ಈ ದಶಕದಲ್ಲಿ ಭಾರತ ಸದೃಢವಾಗಲಿ. ಗಾಂಧಿ-ನೆಹರೂ ಕಂಡ ಕನಸು ನನಸಾಗಲಿ” ಎಂದು ಹಾರೈಸಿದ್ದಾರೆ.
ಇದೇ ಸಂದರ್ಭದಲ್ಲಿ ಕಳೆದ ವರ್ಷದ ಮಹತ್ವದ ಘಟನೆಗಳ ಕುರಿತು ಗಮನ ಸೆಳೆದಿರುವ ಅವರು, “2019ರಲ್ಲಿ ಮಹತ್ವದ ಹಲವು ಕಾನೂನುಗಳು ಜಾರಿಯಾಗಿವೆ. ಹಲವು ಮಹತ್ವದ ಕಾನೂನುಗಳನ್ನು ರೂಪಿಸಿದ್ದೇವೆ. ಸರ್ಕಾರ ತ್ರಿವಳಿ ತಲಾಖ್ ನಿರ್ಬಂಧಿಸಿದೆ. ಮಹಿಳೆಯರ ಸುರಕ್ಷತೆಗಾಗಿ ನಿಷೇಧಿಸಿದೆ. ಚಿಟ್ ಫಂಡ್ ವಂಚನೆ ತಪ್ಪಿಸಲು ಕಾಯ್ದೆ, ಸಿಎಎ ಸೇರಿ ಹಲವು ಐತಿಹಾಸಿಕ ಕಾಯ್ದೆ ಜಾರಿಯಾಗಿದೆ. ಸರ್ಕಾರ ಜನರ ವಿಶ್ವಾಸ ಗಳಿಸಿದೆ. 7 ಲಕ್ಷ ಜನರಿಗೆ ಪಿಂಚಣಿಯ ಲಾಭ ದೊರೆತಿದೆ.
ಅಯೋಧ್ಯೆ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಾರ್ಹ. ನವಭಾರತ ನಿರ್ಮಾಣಕ್ಕೆ ಜನಾದೇಶ ಸಿಕ್ಕಿದೆ. ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆ ಸುಧಾರಣೆಯಾಗಿದೆ. ಹಲವು ಕ್ಷೇತ್ರಗಳಲ್ಲಿ ಸುಧಾರಣೆಯಾಗಿದೆ. ವ್ಯಾಪಾರ ಕ್ಷೇತ್ರದಲ್ಲಿ ಭಾರತದ ಶ್ರೇಯಾಂಕ ವೃದ್ಧಿಯಾಗಿದೆ. ಕಳೆದ 6 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದೇವೆ.  5 ಕೋ. ಜನರಿಗೆ ಆರೋಗ್ಯ ವಿಮೆ ಜಾರಿಯಾಗಿದೆ” ಎಂದು ಸರ್ಕಾರದ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಜಮ್ಮು-ಕಾಶ್ಮೀರದ ವಿಚಾರವನ್ನೂ ಉಲ್ಲೇಖಿಸಿರುವ ರಾಮನಾಥ್​ ಕೋವಿಂದ್, “ಜಮ್ಮುಕಾಶ್ಮೀರ ವಿಕಾಸಕ್ಕೆ ಕೇಂದ್ರ ಸರ್ಕಾರ ಮೊದಲ ಆದ್ಯತೆ ನೀಡುತ್ತದೆ. ಜಮ್ಮುಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಕಣಿವೆ ರಾಜ್ಯದ ಜನತೆಗೆ ಸಮಾನ ಅಧಿಕಾರ ನೀಡಲಾಗುವುದು, ಅಭಿವೃದ್ಧಿ ಪರ್ವ ಆರಂಭವಾಗುವುದು. ಸಬ್ ಕಾ ಸಾತ್ ಮಂತ್ರದಂತೆ ಎಲ್ಲರ ಅಭಿವೃದ್ಧಿಯಾಗಲಿದೆ. ಕಾಶ್ಮೀರದಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಳಿಸಿದ ಅವರು ಕಣಿವೆ ರಾಜ್ಯದ 370ನೇ ವಿಧಿ ರದ್ಧತಿ ಐತಿಹಾಸಿಕ ಕ್ರಮ” ಎಂದು ಶ್ಲಾಘಿಸಿದರು.

ಅಲ್ಲದೆ, “ದೇಶದಲ್ಲಿ ಯಾವುದೇ ಪ್ರತಿಭಟನೆಯ ವೇಳೆಯೂ ಹಿಂಸಾಚಾರ ಸರಿಯಲ್ಲ. ಇಂತಹ ಘಟನೆಗಳಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ